ಫರಂಗಿಪೇಟೆ: ಟೀಮ್ ವೀರಾಂಜನೇಯದ ಲಾಂಛನ ಅನಾವರಣ
ಮಂಗಳೂರು, ಜು.22: ಕಳೆದ 18 ವರ್ಷಗಳಿಂದ ಸಕ್ರಿಯವಾಗಿರುವ ಟೀಮ್ ವೀರಾಂಜನೇಯ ಫರಂಗಿಪೇಟೆ ತಂಡದ ನೂತನ ಲಾಂಛನ ಬಿಡುಗಡೆ ಹಾಗೂ ಧ್ಯೇಯ ವಾಕ್ಯ ಅನಾವರಣ ಕಾರ್ಯಕ್ರಮವು ಅರ್ಕುಳ ಬೀಡುವಿನಲ್ಲಿ ರವಿವಾರ ಜರುಗಿತು.
ಈ ಸಂದರ್ಭ ಅರ್ಕುಳ ಬೀಡು ಧರ್ಮದರ್ಶಿ ವಜ್ರನಾಭ ಶೆಟ್ಟಿ, ಉಪನ್ಯಾಸಕ ಡಾ. ಜಯಕುಮಾರ್ ಶೆಟ್ಟಿ, ಕಂಪ ಸದಾನಂದ ಅಲ್ವಾ, ಚಂದ್ರಶೇಖರ ಗಾಂಭೀರ, ಜನಾರ್ದನ ಅರ್ಕುಳ, ಜಯರಾಜ್ ಕರ್ಕೇರ, ಸಂತೋಷ್ ಕುಮಾರ್ ತುಪ್ಪೆಕಲ್ಲು,ಕೆಆರ್ ಶೆಟ್ಟಿ ಅಡ್ಯಾರ್ ಪದವು, ಸೇಸಪ್ಪಕರ್ಕೇರ ಧರ್ಮಗಿರಿ ಮತ್ತಿತರರು ಪಾಲ್ಗೊಂಡಿದ್ದರು.
ದಿನಕರ ಕರ್ಕೇರ ಮಂಟಮೆ ಸ್ವಾಗತಿಸಿ, ವಂದಿಸಿದರು.
Next Story