ಪ್ರೊ.ಶ್ರೀನಾಥ್ ರಾವ್ಗೆ ರಾಷ್ಟೀಯ ಪ್ರತಿಭಾ ಪ್ರಶಸ್ತಿ ಪ್ರದಾನ
ಉಡುಪಿ, ಜು.24: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಗುಣ ಮಟ್ಟದ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಬಿಜೆಪಿ ಬೇಟೀ ಬಚಾವೋ, ಬೇಟೀ ಪಡಾವೋ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಪ್ರೊ. ಶ್ರೀನಾಥ್ ರಾವ್ ಕುಂದಾಪುರ ಅವರಿಗೆ ಇತ್ತೀಚಿಗೆ ಭಾರತೀಯ ಸಾಮಾಜಿಕ ಅಭಿವೃದ್ಧಿ ಸಂಸ್ಥೆಯು ರಾಷ್ಟ್ರೀಯ ಪ್ರತಿಭಾ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.
ಈ ಸಮಾರಂಭದಲ್ಲಿ ಕೇಂದ್ರ ಸರಕಾರದ ಆಯುಷ್ ಸಚಿವಾಲಯದ ಸದಸ್ಯ ಡಾ.ದಿನೇಶ್ ಉಪಾಧ್ಯಾಯ, ಬಿಜೆಪಿ ರಾಷ್ಟೀಯ ಪೂರ್ವ ಪ್ರಧಾನ ಕಾರ್ಯ ದರ್ಶಿ ಸಂಜಯ್ ಜೋಶಿ, ಪಶ್ಚಿಮ ಬಂಗಾಳದ ಹಿರಿಯ ಐಪಿಎಸ್ ಅಧಿಕಾರಿ ಎಸ್.ಎಂ.ಎಚ್.ಮಿರ್ಜಾ, ಉತ್ತರಾಖಂಡ ರಾಜ್ಯದ ಹಿರಿಯ ನಾಯಕ ಕಮಲ್ ಸಿಂಗ್ ನೇಗಿ, ದೆಹಲಿಯ ಸೆಂಟರ್ ಫಾರ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕಿ ಪ್ರೊ.ಅಮರ್ಜಿತ್ ಕೌರ್, ಬಂಗಾಳಿ ಗಾಯಕ ಮುಖೋಪಾಧ್ಯಾಯ್, ದೆಹಲಿ ವಕೀಲರ ಸಂಘದ ಉಪಾಧ್ಯಕ್ಷ ಡಿ.ಕೆ.ಸಿಂಗ್ ಮೊದಲಾದವರು ಉಪಸ್ಥಿತರಿದ್ದರು.
Next Story