ಆ. 22ರಿಂದ ಮಂಜೇಶ್ವರ ಮಳ್ ಹರ್ ಕ್ಯಾಂಪಸ್ನಲ್ಲಿ ಉರೂಸ್
ಮಂಜೇಶ್ವರ: ಮಳ್ಹರ್ ಸಂಸ್ಥೆಗಳ ಶಿಲ್ಪಿ, ಹಲವಾರು ಮೊಹಲ್ಲಾಗಳ ಖಾಝಿಯೂ ಆಗಿದ್ದ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ (ಖ.ಸಿ) ತಂಙಳ್ರ ನಾಲ್ಕನೇ ಉರೂಸ್ ಕಾರ್ಯಕ್ರಮವು ಆ. 22 ರಿಂದ 25ರವರೆಗೆ ಮಂಜೇಶ್ವರ ಮಳ್ ಹರ್ ಕ್ಯಾಂಪಸ್ನಲ್ಲಿ ನಡೆಯಲಿದೆ ಎಂದು ಸಂಘಟಕರು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಆ. 22 ರಂದು ನಡೆಯುವ ಮಖಾಂ ಝಿಯಾರತ್ಗೆ ಸಯ್ಯಿದ್ ಅತಾವುಲ್ಲಾ ತಂಙಳ್ ಉದ್ಯಾವರ ನೇತೃತ್ವ ನೀಡಲಿದ್ದಾರೆ. ಮುಹಮ್ಮದ್ ಸ್ವಾಲಿಹ್ ಸಅದಿ ತಳಿಪ್ಪರಂಬು ಧ್ವಜಾರೋಹನಗೈಯಲಿದ್ದಾರೆ. ಉಧ್ಘಾಟನಾ ಸಮ್ಮೇಳನದಲ್ಲಿ ಸಯ್ಯಿದ್ ಹಾಮಿದ್ ಇಂಬ್ಬಿಚ್ಚಿಕ್ಕೋಯ ಅಲ್ ಬುಖಾರಿ ಕೊಯಿಲ್ಯಾಂಡಿ ಪ್ರಾರಂಭ ಪ್ರಾರ್ಥನೆ ಮಾಡಲಿದ್ದಾರೆ. ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿಯವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಕೆಎಸ್ ಆಟಕ್ಕೋಯ ತಂಙಳ್ ಕೊಂಬೋಳ್ ಉದ್ಘಾಟನೆ ನೆರವೇರಿಸುವರು. ಬುರ್ದಾ ಮಜ್ಲಿಸ್ಗೆ ಸಯ್ಯಿದ್ ತ್ವಾಹ ತಂಙಳ್ ಪೂಕಟೂರ್, ಹಾಫಿಳ್ ಸ್ವಾದಿಕ್ ಅಲಿ ಫಾಳಿಲಿ ಗೂಡಲ್ಲೂರ್ ನೇತೃತ್ವ ನೀಡಲಿದ್ದಾರೆ. ಸ್ವಲಾತ್ ಮಜ್ಲಿಸ್ಗೆ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ನೇತೃತ್ವ ನೀಡುವರು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ , ಹಸನ್ ಕುಂಞಿ ಮಳ್ಹರ್ , ಹೈದರ್ ಸಖಾಫಿ ಕುಂಜತ್ತೂರು , ಅಬೂಬಕರ್ ಸಿದ್ದೀಕ್ ಸಅದಿ ತೌಡುಗೋಳಿ, ಇಬ್ರಾಹಿಂ ಖಲೀಲ್ ಅಹ್ಸನಿ ಉಪಸ್ತಿತರಿದ್ದರು.