ಆಟೋದಲ್ಲಿ ಕರು ಸಾಗಾಟ: ಮೂವರ ಬಂಧನ
ಮೂಡುಬಿದಿರೆ: ಆಟೋದಲ್ಲಿ ಕರುವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಬೆಳುವಾಯಿ ನಡಿಬೆಟ್ಟು ಕೃಷ್ಣ ಯಾನೆ ಬೊಗ್ಗು, ಸುಂದರ ಮಡಿವಾಳ ಮತ್ತು ರಿಕ್ಷಾ ಚಾಲಕ ಕರಿಯನಂಗಡಿಯ ಶಕಿಲ್ ಅಹ್ಮದ್ ಎಂದು ತಿಳಿದುಬಂದಿದೆ.
ರಿಕ್ಷಾದಲ್ಲಿ ಅಕ್ರಮವಾಗಿ ಕರುವನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನಾಧರಿಸಿ ಮೂಡುಬಿದಿರೆ ಪೊಲೀಸರು ಬೆಳುವಾಯಿ ಸಮೀಪದ ಮಂಜನಕಟ್ಟೆ ಎಂಬಲ್ಲಿ ಗುರುವಾರ ರಾತ್ರಿ ಆಟೋವನ್ನು ತಡೆದು ನಿಲ್ಲಿಸಿದಾಗ ಆರೋಪಿಗಳು ಆಟೋವನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದರು. ಆಟೋ ಚಾಲಕ ಶಕಿಲ್ನನ್ನು ಬಂಧಿಸಿದ ಪೊಲೀಸರು ಆಟೋ ಮತ್ತು ಅದರಲ್ಲಿದ್ದ ಕರುವನ್ನು ವಶಕ್ಕೆ ಪಡಕೊಂಡಿದ್ದಾರೆ.
ಪರಾರಿಯಾಗಿದ್ದ ಕೃಷ್ಣ ಯಾನೆ ಬೊಗ್ಗು ಮತ್ತು ಸುಂದರ ಮಡಿವಾಳರನ್ನು ನಂತರ ಪೊಲೀಸರು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Next Story