ಹೊಸಬೆಳಕು ಆಶ್ರಮದಲ್ಲಿ ‘ಪೊರ್ಲುದ ಆಟಿ’
ಮಣಿಪಾಲ : ಮಣಿಪಾಲದ ಸರಳೆಬೆಟ್ಟಿನಲ್ಲಿರುವ ಹೊಸಬೆಳಕು ಆಶ್ರಮದಲ್ಲಿ ಪೊರ್ಲುದ ಆಟಿ ಕಾರ್ಯಕ್ರಮವನ್ನು ಶನಿವಾರ ವಿಭಿನ್ನವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಕುಂದಾಪುರದ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಉದ್ಘಾಟಿಸಿದು. ಕಾರ್ಯಕ್ರಮದ ಸಂಯೋಜಕಿ ಜ್ಯೋತಿ ರಮನಾಥ್ ಶೆಟ್ಟಿ, ಅಕ್ಷತಾ ಗಿರೀಶ್, ಆಶ್ರಮದ ಸಂಸ್ಥಾಪಕಿ ತನುಲಾ ತರುಣ್, ಶೆರ್ಲಿ ಮನೋಜ್, ಅಶೋಕ್ ತೆಕ್ಕಟ್ಟೆ ಉಪಸ್ಥಿತರಿದ್ದರು.
ಶಶಿಕಾಂತ್ ಶೆಟ್ಟಿ ಸ್ವಾಗತಿಸಿದರು. ಸುಜಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು. ಮನೆಯಲ್ಲಿ ತಯಾರಿಸಿ ತಂದ 40 ಬಗೆಯ ತಿಂಡಿ ತಿನಿಸುಗಳನ್ನು ಆಶ್ರಮದ ನಿವಾಸಿಗಳಿಗೆ ಬಡಿಸಲಾಯಿತು.
Next Story