ಉಡುಪಿ: ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನ ಮೇಲೆ ಬಿದ್ದ ಮರದ ಕೊಂಬೆ
ಅಪಾಯದಿಂದ ಪಾರಾದ ಪ್ರಯಾಣಿಕರು
ಉಡುಪಿ, ಆ. 6: ಕುರ್ಲದಿಂದ ತಿರುವನಂತಪುರಕ್ಕೆ ತೆರಳುವ ನೇತ್ರಾವತಿ ಎಕ್ಸ್ ಪ್ರೆಸ್ ರೈಲು ಮೇಲೆ ಉಡುಪಿ ರೈಲ್ವೆ ನಿಲ್ದಾಣದ ಸಮೀಪ ಮರದ ಕೊಂಬೆಯೊಂದು ಬಿದ್ದು ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ಇಂದು ಬೆಳಗ್ಗೆ 5.30ರ ಸುಮಾರಿಗೆ ನಡೆದಿದೆ.
ಉಡುಪಿಯಲ್ಲಿ ಸುರಿತ್ತಿರುವ ಭಾರೀ ಮಳೆಗೆ ಉಡುಪಿ ರೈಲು ನಿಲ್ದಾಣದ ಸಮೀಪ ಅರಳಿ ಮರದ ದೊಡ್ಡ ಕೊಂಬೆಯೊಂದು ಬೆಳಗ್ಗೆ 5.30 ರ ಸುಮಾರಿಗೆ ನೇತ್ರಾವತಿ ರೈಲಿನ ಮೇಲೆ ಬಿದ್ದಿದೆ.
ಪ್ರಯಾಣಿಕರು ಯಾವುದೇ ಹಾನಿ ಇಲ್ಲದೆ ಪಾರಾಗಿದ್ದು, ರೈಲು ತನ್ನ ಪ್ರಯಾಣ ಮುಂದುವರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story