ಬಕ್ರೀದ್ ಪ್ರಯುಕ್ತ ಬೊಳ್ಳೂರಿನಲ್ಲಿ ದಾರ್ಮಿಕ ಅದ್ಯಯನ ಶಿಬಿರ
ಮಂಗಳೂರು: ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಯೂನಿಟ್ ವತಿಯಿಂದ ಧಾರ್ಮಿಕ ಅದ್ಯಯನ ಶಿಬಿರವು ಮಂಗಳವಾರ ಸಂಜೆ ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಸಭಾಂಗಣ ಬೊಳ್ಳೂರಿನಲ್ಲಿ ಜರುಗಿತು.
ಕಾರ್ಯಕ್ರಮವನ್ನು ಶೈಖುನಾ ಬೊಳ್ಳೂರು ಉಸ್ತಾದರು ಉದ್ಘಾಟಿಸಿದರು, ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಸದಸ್ಯರಾದ ಅಬ್ದುಲ್ ಬಾಯಿಶಾ ಅಧ್ಯಕ್ಷತೆ ವಹಿಸಿದ್ದರು, ಕೊಲ್ನಾಡ್ ಜುಮಾ ಮಸೀದಿಯ ಖತೀಬ್ ಮಹಮ್ಮದ್ ಶರೀಫ್ ದಾರಿಮಿ ಅಲ್ ಹೈತಮಿ "ದುಲ್ ಹಜ್ಜ್ ನಾವೇನು ಮಾಡಬೇಕು" ಎಂಬ ವಿಷಯದ ಕುರಿತು ಪ್ರಭಾಷಣ ನಡೆಸಿದರು.
ಬಿ.ಎಮ್ ಇಬ್ರಾಹಿಂ ಬೊಳ್ಳೂರು ಸ್ವಾಗತಿಸಿದರು.
Next Story