ಉಡುಪಿ: ಎಟಿಎಂ ನಂಬರ್ ಪಡೆದು ಲಕ್ಷಾಂತರ ರೂ. ವಂಚನೆ
ಉಡುಪಿ, ಆ.7: ಬ್ಯಾಂಕ್ ಅಧಿಕಾರಿ ಎಂಬುದಾಗಿ ಹೇಳಿ ಕರೆ ಮಾಡಿ ಎಂಟಿಎಂ ಪಿನ್ ನಂಬರ್ ಪಡೆದು ಲಕ್ಷಾಂತರ ರೂ. ಡ್ರಾ ಮಾಡುವ ಮೂಲಕ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ಹೆಂಗವಳ್ಳಿಯ ಕೃಷ್ಣ ನಾಯ್ಕಿ ಎಂಬವರಿಗೆ ಆ.2ರಂದು ಕೆನರಾ ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಎಟಿಎಂ ಕಾರ್ಡಿನ ಮಾಹಿತಿ ಕೇಳಿದ್ದು, ಅದನ್ನು ನಂಬಿದ ಕೃಷ್ಣ ನಾಯ್ಕಿ, ಎಟಿಎಂ ಕಾರ್ಡ್ ನಂಬರ್, ಸಿವಿವಿ ನಂಬರ್, ಮೊಬೈಲ್ ನಂಬರ್, ಒಟಿಪಿ ನಂಬರ್ ಗಳ ವಿವರ ನೀಡಿದ್ದಾರೆನ್ನಲಾಗಿದೆ.
ಹೀಗೆ ಆರೋಪಿ, ಕೃಷ್ಣ ನಾಯ್ಕರಿಂದ 12 ಬಾರಿ ಒಟಿಪಿ ಪಡೆದು ಕೆನರಾ ಬ್ಯಾಂಕಿನ ಬೆಳ್ವೆ ಶಾಖೆಯ ಖಾತೆಯಿಂದ 1,00,673ರೂ. ಆನ್ಲೈನ್ ಟ್ರಾನ್ಸೆ ಕ್ಷನ್ ಮೂಲಕ ಲಪಟಾಯಿಸಿ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story