ಸುಳ್ಯ: ತಂಪೆರೆದ ಮಳೆ, ರಸ್ತೆಗೆ ಮರ ಬಿದ್ದು ಹಾನಿ
ಸುಳ್ಯ, ಮೇ 4: ಬಿಸಿಲಿನ ಪ್ರಖರತೆಯಿಂದ ಬಳಲಿದ್ದ ಇಳೆಗೆ ಮಂಗಳವಾರ ರಾತ್ರಿ ಸುರಿದ ಮಳೆ ತಂಪೆರೆಯಿತು. ಸುಮಾರು ಅರ್ಧ ಗಂಟೆ ಹೊತ್ತು ಧಾರಾಕಾರ ಮಳೆ ಸುರಿದು ಭೂಮಿ ತಂಪಾಯಿತಲ್ಲದೆ, ಒಣಗಿ ಹೋಗಿದ್ದ ಕೃಷಿಗೂ ಸ್ವಲ್ಪ ಆಶಾದಾಯಕವಾಯಿತು.
ಇದೇ ವೇಳೆ ಬೀಸಿದ ಗಾಳಿಗೆ ದೊಡ್ಡತೋಟ ಮರ್ಕಂಜ ರಸ್ತೆಯ ಕೊರತ್ತೋಡಿ ಎಂಬಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ನೆಲಕ್ಕುರುಳಿತು. ಪರಿಣಾಮ ಸ್ವಲ್ಪ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತಲ್ಲದೆ ವಿದ್ಯುತ್ ವ್ಯವಸ್ಥೆಯೂ ಅಸ್ತವ್ಯಸ್ತಗೊಂಡಿತು.
Next Story