ಹುರ್ಲಾಡಿ ರಘುವೀರ ಶೆಟ್ಟಿಗೆ ಸಮಾಜರತ್ನ
ಕಾರ್ಕಳ, ಆ.15: ಮುಂಬೈಯ ಕನ್ನಡ ಸೇವಾ ಸಂಘ ಪೊವಾಯಿ ನೀಡುವ ವಾರ್ಷಿಕ ಸಮಾಜ ರತ್ನ ಪ್ರಶಸ್ತಿಗೆ ಕಾರ್ಕಳ ನಲ್ಲೂರಿನ ಸಮಾಜ ಸೇವಕ, ಶಿಕ್ಷಣ ಪ್ರೇಮಿ ಹುರ್ಲಾಡಿ ರಘುವೀರ ಶೆಟ್ಟಿ ಆಯ್ಕೆಯಾಗಿದ್ದಾರೆ.
ಆ.17ರಂದು ಮುಂಬೈಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ವರ್ಷದ ಯುವ ಸಾಧಕ ಗೌರವ ‘ಕನ್ನಡ ಜ್ಯೋತಿ’ಗೆ ಹಿರಿಯ ಸಾಹಿತಿ ಡಾ. ಕರುಣಾಕರ ಶೆಟ್ಟಿ ಪಣಿಯೂರು ಆಯ್ಕೆಯಾಗಿದ್ದಾರೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಶೇಖರ ಅಜೆಕಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story