ಬ್ರಹ್ಮಾವರ-ಸೀತಾನದಿ ಮುಖ್ಯ ರಸ್ತೆ ಕಾಮಗಾರಿ ಮಂಜೂರು
ಬ್ರಹ್ಮಾವರ, ಆ.16: ಬ್ರಹ್ಮಾವರ -ಸೀತಾನದಿ ಮುಖ್ಯರಸ್ತೆಯ ಬ್ರಹ್ಮಾವರ ದಿಂದ ಕರ್ಜೆವರೆಗಿನ 30ಕೋಟಿ ರೂ. ವೆಚ್ಚದ 17ಕಿ.ಮೀ. ಉದ್ದದ ರಸ್ತೆ ಕಾಮ ಗಾರಿಗೆ ಸರಕಾರದಿಂದ ಅನುಮೋದನೆ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಇಂದು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೊರಯ್ಯ, ಲೋಕೋ ಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಅಶೋಕ್, ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್ ಭಟ್, ಇಂಜಿನಿಯರ್ ಗಿರೀಶ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಮಾಜಿ ಅಧ್ಯಕ್ಷ ನಳಿನಿ ಪ್ರದೀಪ್ ರಾವ್, ಉಡುಪಿ ನಗರಸಭೆ ಸದಸ್ಯ ಕಕ್ಕುಂಜೆ ಬಾಲಕೃಷ್ಣ ಶೆಟ್ಟಿ, ತಾಪಂ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ ಮೊದಲಾದವರು ಹಾಜರಿದ್ದರು.
Next Story