ಅಂದರ್ ಬಾಹರ್: ನಾಲ್ವರ ಬಂಧನ
ಕುಂದಾಪುರ, ಆ.16: ತಲ್ಲೂರು ಗ್ರಾಮದ ಕೋಟೆಬಾಗಿಲು ರಸ್ತೆಯ ಸುಣ್ಣದ ಪ್ಯಾಕ್ಟರಿಯ ಬಳಿ ಆ.16ರಂದು ಮಧ್ಯಾಹ್ನ ವೇಳೆ ಅಂದರ್ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕೋಟೆಬಾಗಿಲುವಿನ ದಿನೇಶ ಮೊಗವೀರ(32), ಗಣೇಶ ಮೊಗವೀರ(39), ತಲ್ಲೂರಿನ ಸಂತೋಷ ಶೆಟ್ಟಿ(20), ವಂಡ್ಸೆಯ ಸುಕೇಶ ಆಚಾರ್ಯ(24) ಬಂಧಿತ ಆರೋಪಿಗಳು. ಇವರಿಂದ 1070ರೂ. ನಗದು ವಶಪಡಿಸಿಕೊಳ್ಳ ಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story