ಗಂಗೊಳ್ಳಿ: ಹೊಳೆಯಲ್ಲಿ ಮೃತದೇಹ ಪತ್ತೆ
ಗಂಗೊಳ್ಳಿ, ಆ.16: ನಾಡ ಗ್ರಾಮದ ಕಳುವಿನಬಾಗಿಲುನಲ್ಲಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ರಾಬರ್ಟ್ ಬರ್ಬಾಂಜ್ ಎಂಬವರ ಮೃತದೇಹವು ಆ.16ರಂದು ಬೆಳಗ್ಗೆ ಗುಜ್ಜಾಡಿ ಗ್ರಾಮದ ಕಳಿನ ಹಿತ್ಲು ಎಂಬಲ್ಲಿ ಪತ್ತೆಯಾಗಿದೆ.
ಇವರು ಆ.14ರಂದು ಬೆಳಗ್ಗೆ ಹೊಳೆ ಬದಿಯ ಕಾಲು ದಾರಿಯಲ್ಲಿ ಕೊಡೆ ಹಿಡಿದು ನಡೆದುಕೊಂಡು ಹೋಗುತ್ತಿರುವಾಗ ವಿಪರೀತ ಗಾಳಿ ಮಳೆಯಿಂದಾಗಿ ಆಯತಪ್ಪಿಹೊಳೆಗೆ ಬಿದ್ದು ನಾಪತ್ತೆಯಾಗಿದ್ದರೆನ್ನಲಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story