ಎಸ್ ಡಿ ಪಿ ಐ ಕಾವೂರು ವತಿಯಿಂದ ರಕ್ತದಾನ ಶಿಬಿರ
ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾವೂರು ವಲಯ ಹಾಗೂ ರೆಡ್ ಕ್ರಾಸ್ ಸಂಸ್ಥೆ ಇದರ ಜಂಟಿ ಆಶ್ರಯದಲ್ಲಿ 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ಶಾಂತಿನಗರ ಕೇಂದ್ರ ಮೈದಾನದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಕಾವೂರು ವಲಯಾಧ್ಯಕ್ಷ ರಫೀಕ್ ಕೂಳೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಶರೀಫ್ ಕೆ ಎಮ್, ಶಾಂತಿನಗರ ಮಸೀದಿ ಅಧ್ಯಕ್ಷ ಮುಹಮ್ಮದ್ ಕಣ್ಣೂರು, ಪಿಎಫ್ಐ ಬಜ್ಪೆ ಡಿವಿಜೆನ್ ಅಧ್ಯಕ್ಷ ನವಾಝ್ ಕಾವೂರು, ಎಸ್ ಡಿ ಪಿ ಐ ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ಹನೀಫ್ ಪಂಜಿಮೊಗರು, ಸುಲ್ತಾನ್ ಫ್ರೆಂಡ್ಸ್ ವಿದ್ಯಾನಗರ ಅಧ್ಯಕ್ಷ ಶೇಕ್ ಅಬ್ದುಲ್ಲ , ಖಿದ್ಮತುಲ್ ಇಸ್ಲಾಮ್ ಉರುಂದಾಡಿ ಅಧ್ಯಕ್ಷ ಶಾಕಿರ್ ಉರುಂದಾಡಿ ಉಪಸ್ಥಿತರಿದ್ದರು.
ರಕ್ತದಾನದ ಮಹತ್ವ ಕುರಿತು ವೈದ್ಯರಾದ ಡಾ. ಅಭಿಲಾಶ್ ಮತ್ತು ಸಂಸ್ಥೆಯ ಕೋ ಆರ್ಡಿನೇಟರ್ ಪ್ರವೀಣ್ ಕುಮಾರ್ ಮಾತನಾಡಿದರು. ಶಿಬಿರದಲ್ಲಿ ಒಟ್ಟು 83 ಯೂನಿಟ್ ರಕ್ತ ಸಂಗ್ರಹಿಸಲಾಯಿತು.