ಆ.19: ನೆರೆ ಪರಿಹಾರ ಸಾಮಗ್ರಿ ಸ್ವೀಕರಿಸಲು ಕೊನೆಯ ದಿನ
ಮಂಗಳೂರು, ಆ.17: ರಾಜ್ಯದ ಹಾಗೂ ಜಿಲ್ಲೆಯ ವಿವಿಧೆಡೆ ಉಂಟಾಗಿರುವ ನೆರೆ ಹಾಗೂ ಪ್ರಾಕೃತಿಕ ವಿಕೋಪ ಸಂತ್ರಸ್ಥರಿಗೆ ವಿತರಿಸಲು ದ.ಕ. ಜಿಲ್ಲಾಡಳಿತದಿಂದ ಮಂಗಳೂರು ಕೆಪಿಟಿಯಲ್ಲಿ ಸಾರ್ವಜನಿಕರಿಂದ ಆಹಾರ, ಬಟ್ಟೆ-ಬರೆ ಮತ್ತಿತರ ಸಾಮಗ್ರಿಗಳನ್ನು ವಿತರಿಸಲು ಕೇಂದ್ರವನ್ನು ತೆರೆಯಲಾಗಿದದು, ಪರಿಹಾರ ಸಾಮಗ್ರಿ ಸ್ವೀಕರಿಸಲು ಆ.19 ಕೊನೆಯ ದಿನವಾಗಿದೆ.
ಸಾರ್ವಜನಿಕರು ಈಗಾಗಲೇ ಕೇಂದ್ರಕ್ಕೆ ಸಾಕಷ್ಟು ಸಾಮಗ್ರಿಗಳನ್ನು ನೀಡಿದ್ದಾರೆ. ನೆರೆ ಸಂತ್ರಸ್ತರಿಗೆ ಇವುಗಳನ್ನು ಕಳುಹಿಸಲು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿದೆ. ಕೇಂದ್ರವು ಆ.19ರವರೆಗೆ ತೆರೆದಿದ್ದು, ಸಾರ್ವಜನಿಕರು ನೆರೆ ಸಂತ್ರಸ್ತರಿಗೆ ಯಾವುದೇ ವಸ್ತುಗಳನ್ನು ಕೊಡಲು ಇಚ್ಛಿಸಿದ್ದಲ್ಲಿ ಶೀಘ್ರಗತಿಯಲ್ಲಿ ಕೇಂದ್ರಕ್ಕೆ ತಲುಪಿಸಬೇಕು. ನಂತರ ಬಂದ ಸಾಮಗ್ರಿಗಳನ್ನು ಸ್ವೀಕರಿ ಸಲಾಗುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.
Next Story