ಮೂಡುಬಿದಿರೆ: ಮನೆಗೆ ಹಾನಿ, ಶಾಸಕರಿಂದ ಪರಿಹಾರ ಕ್ರಮ
ಮೂಡುಬಿದಿರೆ : ತಾಲ್ಲೂಕಿನ ಪಡುಮಾರ್ನಾಡಿನ ಪೆರ್ನಾಡ್ ಎಂಬಲ್ಲಿ ಮಳೆಗೆ ಮನೆಯ ಗೋಡೆ ಕುಸಿದು ಮನೆ ಮಾಲಕ ಉದಯ ಪೂಜಾರಿ ಎಂಬವರು ಪ್ರಾಣಪಾಯದಿಂದ ಪಾರಾದ ಘಟನೆ ರವಿವಾರ ಬೆಳಿಗ್ಗೆ ನಡೆದಿದೆ.
ಆರ್ಥಿಕವಾಗಿ ಹಿಂದುಳಿದ ಈ ಕುಟುಂಬವನ್ನು ನಂತರ ಊರವರು ಹತ್ತಿರದ ಬಾಡಿಗೆ ಮನೆಗೆ ಸ್ಥಳಾಂತರಿಸಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ತಹಶಿಲ್ದಾರ್ ಅನಿತಾಲಕ್ಷ್ಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರದಿಂದ ಪರಿಹಾರಕ್ಕೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
Next Story