ಕುಂದಾಪುರ: ಜುಗಾರಿ ಆಡುತ್ತಿದ್ದ ನಾಲ್ವರ ಬಂಧನ
ಕುಂದಾಪುರ, ಆ.19: ಕುಂದಾಪುರ ಎಪಿಎಂಸಿ ಮಾರ್ಕೆಟ್ ಬಳಿ ಆ.18 ರಂದು ಅಂದರ್ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ರಮೇಶ ಡಭರಿ(23), ಆನಂದ(25), ಬಾಗಲ ಕೋಟೆ ಜಿಲ್ಲೆಯ ಬಸವ(37), ಮಾಳೇಶ(23) ಬಂಧಿತ ಆರೋಪಿಗಳು. ಇವರಿಂದ 1545ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story