ಎಸ್ಬಿಎಸ್ ಸಂಘಟನೆಗೆ ಆಯ್ಕೆ
ಮಂಗಳೂರು, ಆ.19: ಸುನ್ನಿ ಮದ್ರಸ ಶಿಕ್ಷಕ ಒಕ್ಕೂಟ (ಎಸ್ಜೆಎಂ-ಪಶ್ಚಿಮ ವಿಭಾಗ)ದ ಮದ್ರಸ ವಿದ್ಯಾರ್ಥಿ ಸಂಘಟನೆ ಸುನ್ನಿ ಬಾಲಸಂಘ (ಎಸ್ಬಿಎಸ್)ದ ಮಹಾಸಭೆ ಇತ್ತೀಚೆಗೆ ಪಡೀಲ್ ಮಸ್ಜಿದ್ ಸಭಾಂಗಣದಲ್ಲಿ ಜರಗಿತು.
ಎಸ್ಜೆಎಂ ಜಿಲ್ಲಾಧ್ಯಕ್ಷ ಪಿಎಂ ಮುಹಮ್ಮದ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ನೂರಾನಿ ಸಭೆಯನ್ನು ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಮುಸ್ಲಿಯಾರ್ ವಿಷಯ ಮಂಡಿಸಿದರು. ಜಿಲ್ಲಾ ಉಪಾಧ್ಯಕ್ಷ ಮುಹಿಯುದ್ದೀನ್ ಸಅದಿ ತೋಟಾಲ್, ಜಿಲ್ಲಾ ಕೋಶಾಧಿಕಾರಿ ಇಸ್ಮಾಯೀಲ್ ಸಅದಿ ಉರುಮಣೆ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಮುಹಮ್ಮದ್ ಮಾಝಿನ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಜಝೀಲ್ ಬೋಳಂತೂರು, ಕೋಶಾಧಿಕಾರಿಯಾಗಿ ಇಸ್ಮಾಯೀಲ್ ಕೈಕಂಬ, ಉಪಾಧ್ಯಕ್ಷರಾಗಿ ಹಫೀಝ್ ಕಾಟಿಪಳ್ಳ, ಬಿಲಾಲ್ ತಲಪಾಡಿ, ಸಾಬಿತ್ ಮಂಗಳೂರು, ಅಝೀಮ್ ಸಾಲೆತ್ತೂರು, ತೌಫೀಕ್ ಖಾದರ್ ಸಜಿಪ, ಖಲೀಲ್ ಉರುಮಣೆ, ಕಾರ್ಯದರ್ಶಿಗಳಾಗಿ ಮುಬಾರಿಶ್ ಸುರಿಬೈಲ್, ಫಝಲ್ ಮಂಜನಾಡಿ, ಅನ್ಸಾರ್ ಮುಡಿಪು, ಝಿಯಾದ್ ಜೆಪ್ಪುಆಯ್ಕೆಯಾದರು.