ಸಂಗೀತ: ಅಕ್ಷಯಶಂಕರಿಗೆ ವಿಶಿಷ್ಟ ಶ್ರೇಣಿ
ಉಪ್ಪಿನಂಗಡಿ: ಈ ಬಾರಿ ನಡೆದ ಸಂಗೀತ ಜ್ಯೂನಿಯರ್ ಪರೀಕ್ಷೆಯಲ್ಲಿ ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀರಾಮ ವಿದ್ಯಾಲಯದ 9 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಅಕ್ಷಯ ಶಂಕರಿ ಬಿ 93.5 ಶೇ. ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ಗಾನಭಾರತಿ ಉಪ್ಪಿನಂಗಡಿ ಶಾಖೆಯ ಸ್ವರ್ಣ ಎನ್. ಭಟ್ ಅವರ ಶಿಷ್ಯೆಯಾಗಿದ್ದು, ಉಪ್ಪಿನಂಗಡಿಯ ಬೊಳ್ಳಾವು ರಾಧಾಕೃಷ್ಣ ಭಟ್ ಮತ್ತು ಶಶಿಕಿರಣ ದಂಪತಿಯ ಪುತ್ರಿ.
Next Story