ಆರ್ಎಸ್ಬಿ ಸಭಾಭವನದಲ್ಲಿ ವಾಚನಾಲಯ ಉದ್ಘಾಟನೆ
ಮಣಿಪಾಲ, ಆ.20: ಮಣಿಪಾಲ ಆರ್ಎಸ್ಬಿ ಸಭಾಭವನದ ಎರಡನೆಯ ಅಂತಸ್ತಿನಲ್ಲಿ ನೂತನವಾಗಿ ಆರಂಭಿಸಲಾದ ವಾಚನಾಲಯವನ್ನು ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷ ಎಂ.ಗೋಕುಲ್ದಾಸ್ ನಾಯಕ್ ಇತ್ತೀಚೆಗೆ ಉದ್ಘಾಟಿಸಿದರು.
ರಾಜಾಪುರ ಸಾರಸ್ವತ ಸಂಘ ಮಸ್ಕತ್ ಇದರ ಅಧ್ಯಕ್ಷ ನರಸಿಂಹ ನಾಯಕ್, ಅವರ ಪತ್ನಿ ಮಣಿಪಾಲ ಆರ್ಎಸ್ಬಿ ಮಹಿಳಾ ವೇದಿಕೆಯ ಅಧ್ಯಕ್ಷೆ ಮೋಹಿನಿ ಎನ್.ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ಕುಕ್ಕುದಕಟ್ಟೆ ರಾಮ ದಾಸ್ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ಕಾಮತ್ ವಂದಿಸಿದರು.
Next Story