ಆ. 22ರಿಂದ ಮಂಜೇಶ್ವರ ಮಳ್ ಹರ್ ಕ್ಯಾಂಪಸ್ನಲ್ಲಿ ಉರೂಸ್ ಪ್ರಾರಂಭ
ಮಂಜೇಶ್ವರ: ಮಳ್ಹರ್ ಸಂಸ್ಥೆಗಳ ಶಿಲ್ಪಿ, ಹಲವಾರು ಮೊಹಲ್ಲಾಗಳ ಖಾಝಿಯೂ ಆಗಿದ್ದ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ (ಖ.ಸಿ) ತಂಙಳ್ರವರ ನಾಲ್ಕನೇ ಉರೂಸ್ ಮುಬಾರಕ್ ಆ. 22ರಿಂದ ಮಂಜೇಶ್ವರ ಮಳ್ ಹರ್ ಕ್ಯಾಂಪಸ್ನಲ್ಲಿ ಪ್ರಾರಂಭವಾಗಲಿದೆ.
ಗುರುವಾರ ಸಂಜೆ 4:30ಕ್ಕೆ ನಡೆಯುವ ಮಖಾಂ ಝಿಯಾರತ್ಗೆ ಸಯ್ಯಿದ್ ಅತಾವುಲ್ಲಾ ತಂಙಳ್ ಉದ್ಯಾವರ ನೇತೃತ್ವ ನೀಡಲಿದ್ದಾರೆ. ಶುಕ್ರವಾರ 7 ಗಂಟೆಗೆ ನಡೆಯುವ ಜಲ್ಸತ್ತುಲ್ ಮಹಬ್ಬ ಕಾರ್ಯಕ್ರಮದಲ್ಲಿ ಸಯ್ಯಿದ್ ಅಹ್ಮದ್ ಅಲವಿ ಜಲಾಲುದ್ದೀನ್ ಅಲ್ ಹಾದಿ ಪ್ರಾರಂಭ ಪ್ರಾರ್ಥನೆ ನಡೆಸುವರು. ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಸಯ್ಯಿದ್ ಆಟಕ್ಕೋಯ ತಂಙಳ್ ಬಾಹಸನ್ ತಂಙಳ್ ಅಧ್ಯಕ್ಷತೆಯಲ್ಲಿ ತಾಜುಲ್ ಫುಖಹಾಹ್ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟಿಸುವರು. ಡಾ. ಮುಹಮ್ಮದ್ ಫಾರೂಖ್ ನಈಮಿ ಕೊಲ್ಲಂ ಮುಖ್ಯ ಪ್ರಭಾಷಣೆ ಮಾಡುವರು. ಸಯ್ಯಿದ್ ಅಬ್ದುರಹ್ಮಾನ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ ಸಮಾರೋಪ ಪ್ರಾರ್ಥನಕ್ಕೆ ನೇತೃತ್ವ ವಹಿಸುವರು.
ಮೌಲೀದ್ ಮಜ್ಲಿಸಿಗೆ ಸಯ್ಯಿದ್ ಇಸ್ಮಾಈಲ್ ಬುಖಾರಿ ಕಡಲುಂಡಿ, ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸ್ ಕಿಲ್ಲೂರ್ ನೇತೃತ್ವ ನೀಡುವರು. ಹದಾಯ ಕಾರ್ಯಕ್ರಮಕ್ಕೆ ಸಯ್ಯಿದ್ ಅಬ್ದುಲ್ಲ ಹಬೀಬುರಹ್ಮಾನ್ ಅಲ್ ಬುಖಾರಿ ಕಡಲುಂಡಿ, ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂ ನೇತೃತ್ವ ನೀಡುವರು. ಖತ್ತಂ ದುಆ ಮಜ್ಲಿಸಿಗೆ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರಾ ನೇತೃತ್ವ ನೀಡುವರು.
ನಿಹಾಯ ಸಮಾರೋಪ ಮಹಾ ಸಮ್ಮೇಳನದಲ್ಲಿ ಸಯ್ಯಿದ್ ಅಲಿ ಬಾಫಖಿ ತಂಙಳ್ ಕೊೈಲಾಂಡಿ ಪ್ರಾರಂಭ ಪ್ರಾರ್ಥನೆ ನಡೆಸುವರು. ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹೀಂ ಖಲೀಲುಲ್ ಬುಖಾರಿಯವರ ಅದ್ಯಕ್ಷತೆಯಲ್ಲಿ ತಾಜುಶ್ಶರೀಅ ಎಂ ಅಲಿಕುಂಞಿ ಉಸ್ತಾದ್ ಶಿರಿಯ ಉದ್ಘಾಟಿಸುವರು.
ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯಪ್ರಭಾಷಣೆಗೆಯ್ಯುವರು. ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ, ಡಾ. ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಅನುಸ್ಮರಣಾ ಪ್ರಭಾಷಣೆಗೆಯ್ಯುವರು. ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಎ.ಪಿ ಅಬ್ದುಲ್ಲ ಮುಸ್ಲಿಯಾರ್ ಮಾಣಿಕ್ಕೋತ್, ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್, ಸಯ್ಯಿದ್ ಸಿ.ಟಿ.ಎಂ ಉಮರ್ ಅಸ್ಸಖಾಫ್ ತಂಙಳ್ ಮನ್ ಶರ್, ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ, ಬಿ.ಎಸ್ ಅಬ್ದುಲ್ಲ ಕುಂಞಿ ಫೈಝಿ, ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ, ಶಾಫಿ ಸಅದಿ ಬೆಂಗಳೂರು, ಅಬುರಶೀದ್ ಝೈನಿ ಕಕ್ಕಿಂಜೆ ಮೊದಲಾದ ಪ್ರಮುಖ ವಿದ್ವಾಂಸರು, ರಾಷ್ಟ್ರೀಯ ಸಾಮೂಹಿಕ, ಸಾಂಸ್ಕಾರಿಕ ನೇತಾರರು ಭಾಗವಹಿಸುವರು.