ಉಡುಪಿಯಲ್ಲಿ ‘ಮಗಳೇ’ ಕಿರುಚಿತ್ರ ಬಿಡುಗಡೆ
ಉಡುಪಿ, ಆ.22: ಎಸ್.ಆರ್.ಪ್ರೊಡಕ್ಷನ್ಸ್ ಅವರ ‘ಮಗಳೇ’ ಕಿರುಚಿತ್ರವನ್ನು ರಂಗ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಗುರುವಾರ ಉಡುಪಿ ಪ್ರೆಸ್ ಕ್ಲಬ್ನಲ್ಲಿ ಬಿಡುಗಡೆಗೊಳಿಸಿದರು.
ಹೆಣ್ಣು ಮಕ್ಕಳ ಋತುಸ್ರಾವದ ಸಮಸ್ಯೆ ಕುರಿತು ಸಂದೇಶ ಸಾರುವ ಈ ಕಿರು ಚಿತ್ರವನ್ನು ಮುಂದೆ ಯೂಟ್ಯೂಬ್ನಲ್ಲಿ ಬಿಡುಗಡೆ ಹಾಗೂ ಶಾಲಾ ಕಾಲೇಜು ಗಳಲ್ಲಿ ಪ್ರದರ್ಶಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಕಿರುಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದ ನಿರ್ದೇಶಕ ಸುರೇಶ್ ಆರ್.ಎಸ್. ಬಲ್ಮಠ ತಿಳಿಸಿದ್ದಾರೆ.
ಸುದರ್ಶನ್ ಸುವರ್ಣ ಕಿದಿಯೂರು ಮತ್ತು ರೋಹಿತ್ ಮಲ್ಪೆ ನಿರ್ಮಾಣದ ಈ ಚಿತ್ರದಲ್ಲಿ ಸುಜಾತ ಶೆಟ್ಟಿ ಪೆರಿಂಜೆ, ಪಲ್ಲವಿ ಕೊಡಗು, ಸುದರ್ಶನ್ ಸುವರ್ಣ, ಶುಭಲಕ್ಷ್ಮೀ ಕಡೆಕಾರ್ ಮುಖ್ಯಪಾತ್ರದಲ್ಲಿದ್ದು, ಮಲ್ಪೆ ಪಡುಕೆರೆಗಳಲ್ಲಿ ಚಿತ್ರೀ ಕರಣ ಮಾಡಲಾಗಿದೆ.
ಈ ಸಂದರ್ಭದಲ್ಲಿ ನಿರ್ಮಾಪಕ ಸುದರ್ಶನ್ ಸುವರ್ಣ, ಶುಭಲಕ್ಷ್ಮೀ ಕಡೆ ಕಾರ್ ಉಪಸ್ಥಿತರಿದ್ದರು.
Next Story