ಡಿವೈಎಫ್ಐಯಿಂದ ನೆರೆ ಸಂತ್ರಸ್ಥರ ಪರಿಹಾರ ಸಾಮಾಗ್ರಿ ಹಸ್ತಾಂತರ
ಕುಂದಾಪುರ, ಆ.22: ಕುಂದಾಪುರ ಡಿವೈಎಫ್ಐ ಯುವಜನ ಸಂಘ ಟನೆಯು ಸಾರ್ವಜನಿಕರಿಂದ ಸಂಗ್ರಹಿಸಿದ ಪರಿಹಾರ ಸಾಮಾಗ್ರಿಗಳನ್ನು ಇಂದು ಉತ್ತರ ಕನ್ನಡ ಜಿಲ್ಲೆಗೆ ತೆರಳಿ ಸಂತ್ರಸ್ಥರಿಗೆ ಹಸ್ತಾಂತರಿಸಲಾಯಿತು.
ಅಂಕೋಲದ ಕಲ್ಲೇಶ್ವರ ನೆರೆ ಸಂತ್ರಸ್ಥ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರ ದಿಂದ ಪರಿಹಾರ ವಿತರಿಸಲಾಯಿತು. ಈ ವೇಳೆಯಲ್ಲಿ ಸಿಪಿಐಎಂ ಪಕ್ಷದ ಕುಂದಾಪುರ ಕಾರ್ಯದರ್ಶಿ ಎಚ್.ನರಸಿಂಹ, ಡಿವೈಎಫ್ಐ ತಾಲೂಕು ಅಧ್ಯಕ್ಷ ರಾಜೇಶ್ ವಡೇರಹೋಬಳಿ, ಡಿವೈಎಫ್ಐ ಮುಖಂಡರಾದ ರಾಜ ಬಿಟಿಆರ್, ಗಣೇಶ್ ಕಲ್ಲಾಗರ, ಅಕ್ಷಯ ವಡೇರಹೋಬಳಿ, ಸಂಪತ್ ಬಿಟಿಆರ್ ಹಾಜರಿದ್ದರು.
ನೆರೆಪರಿಹಾರ ಸಾಮಾಗ್ರಿ ಸಂಗ್ರಹಿಸುವ ವೇಳೆಯಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ನಿಧಿಯನ್ನು ಡಿವೈಎಫ್ಐ ರಾಜ್ಯ ಸಮಿತಿ ಮೂಲಕ ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ಕಳುಹಿಸಲಾಗಿದೆ.
Next Story