ಕೋಟೆಕಾರ್: ಎಸ್ವೈಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಕೋಟೆಕಾರ್, ಆ.25: ಎಸ್ವೈಎಸ್ ಕರ್ನಾಟಕ ರಾಜ್ಯ ಸಮಿತಿ ನಿರ್ದೇಶನದ ಮೇರೆಗೆ ಆ.30ರವರೆಗೆ ನಡೆಯುವ ಎಸ್ವೈಎಸ್ ಸದಸ್ಯತ್ವ ಅಭಿಯಾನಕ್ಕೆ ರವಿವಾರ ಹಿದಾಯತ್ ನಗರ ಬ್ರಾಂಚ್ ವತಿಯಿಂದ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಸನ್ ಸಖಾಫಿ, ಅಹ್ಮದ್ ಕಬೀರ್ ಸಅದಿ ಉಳ್ಳಾಲ, ಅಬ್ಬುಲ್ ಅಝೀಝ್ ಸಖಾಫಿ, ಮಸೀದಿಯ ಉಪಾಧ್ಯಕ್ಷ ಕೆ.ಎಂ. ಅಬ್ದುಲ್ ಖಾದರ್, ಅಬ್ದುಲ್ ಬಶೀರ್, ಅಬ್ದುಲ್ ಸಲಾಂ, ಕಾರ್ಯದರ್ಶಿ ರಾಝಿನ್ ಪಾಲ್ಗೊಂಡಿದ್ದರು.
Next Story