ಕುಂದಾಪುರ: ಶರಫುಲ್ ಉಲಮಾರ ಅನುಸ್ಮರಣೆ
ಕುಂದಾಪುರ, ಆ.25: ಇತ್ತೀಚೆಗೆ ಅಗಲಿದ ಕರ್ನಾಟಕ ಸುನ್ನೀ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಶರಫುಲ್ ಉಲಮ ಅಬ್ಬಾಸ್ ಉಸ್ತಾದ್ ಅನುಸ್ಮರಣೆ ಹಾಗೂ ದುಅ ಮಜ್ಲಿಸ್ ಕಾರ್ಯಕ್ರಮ ಕುಂದಾಪುರದ ಸಖಾಫಿಯ್ಯ ವಿಮೆನ್ಸ್ ಅಕಾಡೆಮಿ ಕ್ಯಾಂಪಸ್ನಲ್ಲಿ ಇತ್ತೀಚೆಗೆ ಜರಗಿತು.
ಐ.ಬಿ.ಟಿ ಗಾರ್ಡನ್ ಅಧ್ಯಕ್ಷ ಅಸ್ಸಯ್ಯಿದ್ ಕೋಟೇಶ್ವರ ತಂಙಳ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಮೂಡುಗೋಪಾಡಿ ಮಸೀದಿಯ ಖತೀಬ್ ಅಬೂಬಕ್ಕರ್ ಸಅದಿ ಉದ್ಘಾಟಿಸಿದರು. ಸಖಾಫಿಯ್ಯ ವಿಮೆನ್ಸ್ ಅಕಾಡೆಮಿಯ ಪ್ರಾಧ್ಯಾಪಕ ಅಮೀರ್ ಖಾನ್ ಅಹ್ಸನಿ ಮಾತನಾಡಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಕೆ.ಎ. ಅಬ್ದುರಹ್ಮಾನ್ ರಝ್ವಿ ಕಲ್ಕಟ್ಟ ಅನುಸ್ಮರಣಾ ಭಾಷಣ ಮಾಡಿದರು. ಅಸ್ಸಯ್ಯಿದ್ ಜುನೈದ್ ತಂಙಳ್ ಕಾಸರಗೋಡು, ಕುಂದಾಪುರ ಅಭಿವೃದ್ಧಿ ಸಮಿತಿಯ ಮುಂದಾಳು ಹಸನ್ ಜನ್ಸಾಲೆ, ನುಸ್ರತುಲ್ ಮಸಾಕೀನ್ ಕುಂದಾಪುರ ಅಧ್ಯಕ್ಷ ಸರ್ದಾರ್ ಗುಲ್ವಾಡಿ, ಎಸ್ವೈಎಸ್ ರಾಜ್ಯ ನಾಯಕ ಗುಡ್ವಿಲ್ ಹಾಜಿ ಮಯ್ಯದ್ದಿ, ಜಿಲ್ಲಾ ಕಾರ್ಯದರ್ಶಿ ಅಡ್ವಕೇಟ್ ಹಂಝತ್ ಹೆಜಮಾಡಿ, ಹಸನ್ ಸಖಾಫಿ ಬೆಜ್ಜವಳ್ಳಿ, ಅಲ್ ಆರಿಫ್ ಮಶ್ಹೂದ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.
ಐಬಿಟಿ ಗಾರ್ಡನ್ ಕಾರ್ಯದರ್ಶಿ ಬಿ.ಎಂ.ನಾಸಿರ್ ಮೂಡುಗೋಪಾಡಿ ಸ್ವಾಗತಿಸಿದರು. ಸಖಾಫಿಯ್ಯ ವಿಮೆನ್ಸ್ ಅಕಾಡೆಮಿಯ ನೌಫಲ್ ಮದನಿ ನೇಜಾರ್ ಕಾರ್ಯಕ್ರಮ ನಿರೂಪಿಸಿದರು.