ಶಾಲಾ ಮಕ್ಕಳಿಗೆ ಜಿಲ್ಲಾಮಟ್ಟದ ಸ್ಪರ್ಧೆ ಉದ್ಘಾಟನೆ
ಉಡುಪಿ, ಆ.25: ಅಲೆವೂರು ಗುಡ್ಡೆಅಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 35ನೇ ವರ್ಷದ ಗಣೇಶೊತ್ಸವದ ಅಂಗವಾಗಿ ಮಂಗಳೂರು ಯುವವಾಹಿನಿ ಉಡುಪಿ ಘಟಕದ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಮಟ್ಟದ ಶಾಲಾ ಮಕ್ಕಳಿಗೆ ಪ್ರಬಂಧ, ಚಿತ್ರಕಲೆ ಮತ್ತು ಭಕ್ತಿಸಂಗೀತ ಸ್ಪರ್ಧೆಯು ರವಿವಾರ ಸಮಿತಿಯ ಸಂಕಲ್ಪಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಯುವವಾಹಿನಿ ಉಡುಪಿ ಘಟಕದ ಉಪಾಧ್ಯಕ್ಷ ಜಗದೀಶ್ ಕೋಟ್ಯಾನ್, ಕಾರ್ಯದರ್ಶಿ ಮಹಾಬಲ ಅಮೀನ್, ನಿವೃತ್ತ ಸೇನಾಧಿಕಾರಿ ಅಶೋಕ್ ಕೋಟ್ಯಾನ್, ಸಮಿತಿಯ ಗೌರವಾಧ್ಯಕ್ಷ ಶೇಖರ ಕಲ್ಮಾಡಿ, ಅಧ್ಯಕ್ಷ ರೂಪೇಶ್ ಆಚಾರ್ಯ, ಕೋಶಾಧಿಕಾರಿ ಚಂದ್ರಹಾಸ ಪೈ, ಪ್ರಧಾನ ಕಾರ್ಯದರ್ಶಿ ರಂಜಿತ್ ನಾಯ್ಕ್, ಸಾಂಸ್ಕೃತಿಕ ಕಾರ್ಯದರ್ಶಿ ಸಮರನಾಥ ಶೆಟ್ಟಿ, ಪತ್ರಕರ್ತ ನಾಗರಾಜ ರಾವ್ ವರ್ಕಾಡಿ ಉಪಸ್ಥಿತರಿದ್ದರು.
ಸಮಿತಿಯ ಮಂಜೇಶ್ ಕುಮಾರ್ ಸ್ವಾಗತಿಸಿದರು. ಎ.ರಾಜೇಶ್ ಶೆಟ್ಟಿ ವಂದಿಸಿದರು. ಸುಖೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ನಂತರ ಸ್ಫರ್ಧಾಳುಗಳಿಗೆ ವಿವಿಧ ಸ್ಫರ್ಧೆಗಳು ನಡೆದವು.
Next Story