ಪುತ್ತೂರು: ಎಸ್.ವೈ.ಎಸ್ ರಾಜ್ಯ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಪುತ್ತೂರು, ಆ.25: ಎಸ್.ವೈ.ಎಸ್ ರಾಜ್ಯ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಬನ್ನೂರು ಸಯ್ಯಿದ್ ಉಮರ್ ಅಲ್ ಹಾದಿ ತಂಙಳ್ ಅವರಿಂದ ಸದಸ್ಯತ್ವ ಅಪೇಕ್ಷೆ ಸ್ವೀಕರಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಸುನ್ನೀ ಸೆಂಟರ್ ನಲ್ಲಿ ಚಾಲನೆ ನೀಡಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು, ಉಪಾಧ್ಯಕ್ಷ ಅಬೂಸುಫ್ಯಾನ್ ಮದನಿ, ಸುನ್ನೀ ಕೋರ್ಡಿನೇಶನ್ ಪ್ರಧಾನ ಕಾರ್ಯದರ್ಶಿ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ, ಎಸ್.ವೈ.ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ, ಎಸ್.ವೈ.ಎಸ್ ಪುತ್ತೂರು ಝೋನಲ್ ಅಧ್ಯಕ್ಷ ಅಬೂಬಕರ್ ಸಅದಿ ಮಜೂರು, ಪ್ರ.ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್, ಎಸ್.ವೈ.ಎಸ್ ಪುತ್ತೂರು ಸೆಂಟರ್ ಅಧ್ಯಕ್ಷ ಅಶ್ರಫ್ ಸಖಾಫಿ ಸವಣೂರು, ಪ್ರ.ಕಾರ್ಯದರ್ಶಿ ಸಾಲಿಹ್ ಮುರ, ಟೀಂ ಇಸಾಬ ಪುತ್ತೂರು ಝೋನಲ್ ಅಮೀರ್ ಇಕ್ಬಾಲ್ ಬಪ್ಪಳಿಗೆ, ಟೀಂ ಇಸಾಬ ಪುತ್ತೂರು ಸೆಂಟರ್ ಅಮೀರ್ ಅಬ್ದುರ್ರಝಾಕ್ ಖಾಸಿಮಿ ಕೂರ್ನಡ್ಕ, ರಾಜ್ಯ ಎಸ್ಸೆಸ್ಸೆಫ್ ಸದಸ್ಯ ಅಡ್ವಕೇಟ್ ಶಾಕಿರ್ ಹಾಜಿ, ಆದಂ ಹಾಜಿ ಪಡೀಲ್, ಇಸ್ಮಾಯಿಲ್ ಹಾಜಿ ಬನ್ನೂರು, ಹಸೈನಾರ್ ಹಾಜಿ ಮಜ್ಮ, ಶಾಹುಲ್ ಹಮೀದ್ ಕಬಕ, ಸಿದ್ದೀಕ್ ಹಾಜಿ ಕಬಕ, ಎಸ್.ವೈ.ಎಸ್ ಟೌನ್ ಬ್ರಾಂಚ್ ಕಾರ್ಯದರ್ಶಿ ಅಬ್ಬಾಸ್ ಸಾಲ್ಮರ, ಪುತ್ತೂರು ಎಸ್.ವೈ.ಎಸ್ ಸೆಂಟರ್ ಸದಸ್ಯರಾದ ಎಸ್.ಇ ಅಬ್ದುಲ್ಲಾ, ಹಸೈನಾರ್ ಕೆಮ್ಮಾಯಿ, ಹಾಜಿ ಕಸ್ತೂರಿ ಅಬ್ದುಲ್ ರಝಾಕ್, ಸವಣೂರು ಯೂಸುಫ್, ಟೀಂ ಇಸಾಬ ಸವಣೂರು ಬ್ರಾಂಚ್ ಅಮೀರ್ ಇಕ್ಬಾಲ್ ಕೇಕುಡೆ ಸೇರಿ ಅನೇಕರು ಉಪಸ್ಥಿತರಿದ್ದರು.