ಅಕ್ರಮ ಜಾನುವಾರು ಸಾಗಾಟ ಆರೋಪ: ಇಬ್ಬರು ವಶಕ್ಕೆ
ಬೈಂದೂರು, ಆ.26: ಬೊಲೇರೋ ಪಿಕ್ಅಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬೈಂದೂರು ಪೊಲೀಸರು ರವಿವಾರ ಸಂಜೆ ಯಡ್ತರೆ ಜಂಕ್ಷನ್ ಬಳಿ ಬಂಧಿಸಿದ್ದಾರೆ.
ಭಟ್ಕಳ ಸರ್ಪನಕಟ್ಟೆಯ ಮಂಜುನಾಥ ನಾಯ್ಕ(65) ಹಾಗೂ ಬಿಜೂರು ಗ್ರಾಮದ ರತ್ನಾಕರ ಪೂಜಾರಿ(20) ಬಂಧಿತ ಆರೋಪಿಗಳು.
ಇವರು ಹೇರಂಜಾಲುವಿನ ಮಾಚ ಪೂಜಾರಿ ಎಂಬವರಿಂದ ಖರೀದಿಸಿದ ಎರಡು ಕೋಣಗಳನ್ನು ಯಾವುದೇ ದಾಖಲಾತಿಗಳಿಲ್ಲದೆ ಮನೆಗೆ ಸಾಗಿಸುತ್ತಿದ್ದರೆನ್ನ ಲಾಗಿದೆ. ಇವರಿಂದ 55,000 ರೂ. ಮೌಲ್ಯದ ಕೋಣ ಹಾಗೂ 4,00,000 ರೂ. ಮೌಲ್ಯದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story