ಮಕ್ಕತುಲ್ ಮುಕರ್ರಮದಲ್ಲಿ ಶೈಖುನಾ ಖಾಸಿಂ ಉಸ್ತಾದ್ ಅನುಸ್ಮರಣಾ ಸಂಗಮ
ಮಂಗಳೂರು : ದ.ಕ.ಜಿಲ್ಲಾ ಪೈಝೀಸ್ ವತಿಯಿಂದ ಮರ್ಹೂಮ್ ಶೈಖುನಾ ಖಾಸಿಂ ಉಸ್ತಾದ್ ಅವರ ಅನುಸ್ಮರಣಾ ಸಂಗಮವು ಮಕ್ಕತುಲ್ ಮುಕರ್ರಮದಲ್ಲಿ ಅಶ್ಫಾಖ್ ಪೈಝಿ ಅಧ್ಶಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ಸಮಿತಿಯ ಅಧ್ಯಕ್ಷ ರಿಯಾಝ್ ರಹ್ಮಾನಿ ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಸ್ವದಖತ್ತುಲ್ಲಾ ಫೈಝಿ ಮುಖ್ಯ ಭಾಷಣ ಮಾಡಿದರು.
ಸಭೆಯಲ್ಲಿ ಸೈಫುಲ್ಲಾ ಕೌಸರಿ, ಯಹ್ಶಾ ದಾರಿಮಿ ಮುಂತಾದವರು ಭಾಗವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಪೈಝಿ ಸ್ವಾಗತಿಸಿ, ವಂದಿಸಿದರು
Next Story