ಪರೀಕ್ಷೆಯಲ್ಲಿ ಅನುತ್ತೀರ್ಣ: ಬಾಲಕ ಆತ್ಮಹತ್ಯೆ
ಕೋಟ, ಆ.31: ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿಚಾರದಲ್ಲಿ ಮಾನಸಿಕ ವಾಗಿ ನೊಂದ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣೂರು ಗ್ರಾಮದ ಬಾಳೆಬೆಟ್ಟು ಎಂಬಲ್ಲಿ ಆ.31ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಬಾಳೆಬೆಟ್ಟುವಿನ ಉಷಾ ಮಂಜುನಾಥ ಗಾಣಿಗ ಎಂಬವರ ಮಗ ರಿತೀಶ(17) ಎಂದು ಗುರುತಿಸಲಾಗಿದೆ.
ಇವರು ಶಾಲೆಗೆ ಹೋಗದೆ ಮನೆ ಯಲ್ಲೇ ಇದ್ದು, ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದ ಎನ್ನಲಾಗಿದೆ. ಇದೇ ಚಿಂತೆಯಲ್ಲಿ ಮನೆಯ ರೂಮ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿ ದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story