ಕೆನರಾ ಬ್ಯಾಂಕ್ ಉದ್ಯೋಗಿ ಮುಹಮ್ಮದ್ ಯೂಸುಫ್ ಸಾಹುಕಾರ್ ನಿಧನ
ಸುರತ್ಕಲ್, ಸೆ.7: ಮುಹಮ್ಮದ್ ಯೂಸುಫ್ ಸಾಹುಕಾರ್ ಸುರತ್ಕಲ್ (55) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ಚಿಕ್ಕಮಗಳೂರಿನಲ್ಲಿ ನಿಧನರಾದರು.
ಇವರು ಚಿಕ್ಕಮಗಳೂರಿನಲ್ಲಿ ಕೆನರಾ ಬ್ಯಾಂಕ್ ಡಿವಿಜನಲ್ ಆಫೀಸ್ ಉದ್ಯೋಗಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story