ಅಜ್ಜರಕಾಡು: ಮೂಳೆ ಸಾಂದ್ರತೆ ತಪಾಸಣಾ ಕಾರ್ಯಕ್ರಮ
ಉಡುಪಿ, ಸೆ.11: ಇಲ್ಲಿನ ಅಜ್ಜರಕಾಡಿನ ಹಿರಿಯ ನಾಗರಿಕರ ಕಚೇರಿಯಲ್ಲಿ ಮೂಳೆ ಸಾಂದ್ರತಾ ತಪಾಸಣಾ ಕಾರ್ಯಕ್ರಮ ಬುಧವಾರ ನಡೆಯಿತು. ಕಾರ್ಯಕ್ರಮವನ್ನು ಸೆಂಟ್ರಲ್ ಕಮಿಟಿ ಸದಸ್ಯರಾದ ದಿನಕರ್ ಅಮೀನ್ ಮತ್ತು ಹಿರಿಯ ನಾಗರಿಕ ವೇದಿಕೆಯ ಉಪಾಧ್ಯಕ್ಷ ವಿಶ್ವನಾಥ ಹೆಗ್ಡೆ ಉದ್ಘಾಟಿಸಿದರು.
ಜಯಂಟ್ಸ್ ಯುನಿಟ್ ಡೈರೆಕ್ಟರ್ ಜ| ರಮೇಶ್ ಪೂಜಾರಿ, ಜಯಂಟ್ಸ್ ಉಡುಪಿ ಅಧ್ಯಕ್ಷ ಜ| ಲಕ್ಷ್ಮೀಕಾಂತ್ ಬೆಸ್ಕೂರ್, ಉಪಾಧ್ಯಕ್ಷ ಜ| ಇಕ್ಬಾಲ್ ಮನ್ನಾ, ಪೂರ್ವಾಧ್ಯಕ್ಷರುಗಳಾದ ಜ| ಉಷಾ ರಮೇಶ್, ಜ| ರಾಜೇಶ್ ಶೆಟ್ಟಿ, ಜ| ದೇವದಾಸ್ ಕಾಮತ್, ಜ| ರೇಖಾ ಪೈ, ಜ| ವಿನ್ಸೆಂಟ್ ಸಲ್ಡಾನ ಮತ್ತು ಜಯಂಟ್ಸ್ ಸದಸ್ಯರು, ಹಿರಿಯ ನಾಗರಿಕ ಸಂಸ್ಥೆಯ ಉಪಾಧ್ಯಕ್ಷ ಸದಾನಂದ ಹೆಗ್ಡೆ ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Next Story