ಬೆಳುವಾಯಿ: ಅಡಿಕೆ ಕೀಳುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶ; ಯುವಕ ಮೃತ್ಯು
ಮೂಡುಬಿದಿರೆ, ಸೆ.12: ತೋಟದಲ್ಲಿ ಮರವೇರಿ ಅಡಿಕೆ ಕೀಳುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಗೊಂಡು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಬೆಳುವಾಯಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಇಲ್ಲಿನ ನಿವಾಸಿ ಕೀರ್ತಿ(30) ಮೃತಪಟ್ಟ ಯುವಕ. ಇವರು ಇಂದು ಬೆಳಗ್ಗೆ ಅಡಿಕೆ ಕೀಳಲೆಂದು ಮರವೇರಿದ್ದ ಸಂದರ್ಭ ಮರದ ಸಮೀಪದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದರೆನ್ನಲಾಗಿದೆ. ಈ ವೇಳೆ ವಿದ್ಯುತ್ ಆಘಾತಕ್ಕೊಳಗಾದ ಕೀರ್ತಿ ಮರದಿಂದ ಕೆಳಗೆ ಎಸೆಯಲ್ಪಟ್ಟು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ.
Next Story