15ಕ್ಕೆ ಎಂಐಟಿಯಲ್ಲಿ ಇಂಜಿನಿಯರ್ಸ್ ಡೇ
ಮಣಿಪಾಲ, ಸೆ.12: ಸೆ.15ರ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಮಣಿಪಾಲದ ಎಂಐಟಿಯ ಎಂ.ವಿ.ಸೆಮಿನಾರ್ ಹಾಲ್ನಲ್ಲಿ ಇಂಜಿನಿಯರ್ಸ್ ದಿನವಾಗಿ ಆಚರಿಸಲಾಗುತ್ತದೆ. ಗೋವಾ ವಿವಿಯ ನಿವೃತ್ತ ಕುಲಪತಿ ಪ್ರೊ.ಬಿ.ಎಸ್.ಸೊಂಧಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರೊ.ಪಿ.ವಿ.ಭಂಡಾರಿ ಸ್ಮಾರಕ ದತ್ತಿ ಉಪನ್ಯಾಸವೂ ನಡೆಯಲಿದೆ ಎಂದು ಎಂಐಟಿಯ ಪ್ರಕಟಣೆ ತಿಳಿಸಿದೆ.
Next Story