ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ವತಿಯಿಂದ 'ಹಳೆ ಬೇರು ಹೊಸ ಚಿಗುರು' ಕಾರ್ಯಕ್ರಮ
ಬಂಟ್ವಾಳ, ಸೆ.13: ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಸಮಿತಿಯ ವತಿಯಿಂದ 'ಹಳೆ ಬೇರು ಹೊಸ ಚಿಗುರು' ಕಾರ್ಯಕ್ರಮ ಬಿ.ಸಿ ರೋಡ್ ನ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ಇತ್ತೀಚೆಗೆ ಡಿವಿಷನ್ ಅಧ್ಯಕ್ಷ ಅಕ್ಬರ್ ಅಲಿ ಮದನಿ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಡಿವಿಷನ್ ಉಪಾಧ್ಯಕ್ಷ ಸಿದ್ದೀಕ್ ಸಅದಿ ಉದ್ಘಾಟಿಸಿದರು. ಇಸ್ಹಾಕ್ ಝುಹ್ರಿ ಸೂರಿಂಜೆ 'ಹಳೆ ಬೇರು ಹೊಸ ಚಿಗುರು' ವಿಷಯದ ಕುರಿತು ತರಗತಿ ಮಂಡಿಸಿದರು. ಎಸ್.ವೈ.ಎಸ್ ನಾಯಕ ಅಬ್ದುಲ್ಲಾ ಕೊಳಕೆ, ಉಸ್ಮಾನ್ ಮಲಿಕ್ ನಂದಾವರ ತಮ್ಮ ಬಾಲ್ಯದಲ್ಲಿನ ಸಂಘಟನೆಯ ಅನುಭವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ಸೇರಿ ಡಿವಿಷನ್ ಮತ್ತು ಸೆಕ್ಟರ್ ಕಾರ್ಯನಿರ್ವಾಹಕ ಸದಸ್ಯರು ಭಾಗವಹಿಸಿದರು. ಪ್ರಧಾನ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಸ್ವಾಗತಿಸಿದರು.
Next Story