ಸೆ.14: ಹೃದಯ- ಕ್ರೀಡಾ ಸಂಬಂಧಿತ ನೋವಿಗೆ ಉಚಿತ ತಪಾಸಣೆ
ಮಂಗಳೂರು, ಸೆ.13: ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಸನ್ ಮಂಗಳೂರು ಕೆಎಂಸಿ ಆಸ್ಪತ್ರೆ ಇದರ ಸಹಯೋಗದೊಂದಿಗೆ ಕೆಎಂಸಿ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ.ಪದ್ಮ ನಾಭ ಕಾಮತ್ ಮತ್ತು ಡಾ.ಅರವಿಂದ ಎಂ.ಸ್ಪೋಟ್ಸ್ ಮೆಡಿಸಿನ್ ತಜ್ಞರು ಮತ್ತು ತಂಡದವರಿಂದ ಉಚಿತವಾಗಿ ಹೃದಯ ಮತ್ತು ಕ್ರೀಡಾ ಸಂಬಂಧಿತ ನೋವಿನ ತಪಾಸಣಾ ಶಿಬಿರವನ್ನು ಸೆ.14ರಂದು ಬೆ.8ರಿಂದ 11ರವರೆಗೆ ಮಂಗಳಾ ಕ್ರೀಡಾಂಗಣದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಇಸಿಜಿ, ರಕ್ತ ದೊತ್ತಡ, ಮಧು ಮೇಹ ತಪಾಸಣೆ ಹಾಗೂ ಸ್ಪೋಟ್ಸ್ ಸಂಬಂಧಿತ ನೋವಿಗೆ ಸಂಬಂಧಪಟ್ಟ ಭುಜ ನೋವು, ಗಂಟು ನೋವು, ಸ್ನಾಯು ಸೆಳೆತ, ಮೊಣಕಾಲು ನೋವು ಮೊಣ ಕೈ ನೋವು ಇನ್ನಿತರ ಕ್ರೀಡಾ ಸಂಬಂಧಿತ ಕಾಯಿಲೆಗಳಿಗೆ ಸೂಕ್ತ ಸಲಹೆ ಚಿಕಿತ್ಸೆ ಮತ್ತು ಎಲುಬಿನ ಖನಿಜ ಸಾಂದ್ರತೆ ಉಚಿತ ತಪಾಸಣೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
Next Story