ಶ್ರೀಕೃಷ್ಣ ಜನ್ಮಾಷ್ಟಮಿ ವೇಷದ ಮೂಲಕ ಮಕ್ಕಳ ಚಿಕಿತ್ಸೆಗೆ ನೆರವು
ಮಲ್ಪೆ, ಸೆ.16: ಮಲ್ಪೆ ಶ್ರೀಸರ್ವೇಶ್ವರ ್ರೆಂಡ್ಸ್ನ ಚೇತನ್ ಬಾಪುತೋಟ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ವೇಷ ಧರಿಸಿ ಸಂಗ್ರಹಿಸಿದ 1.55ಲಕ್ಷ ರೂ.ವನ್ನು ಇಬ್ಬರು ಮಕ್ಕಳ ವೈದ್ಯಕೀಯ ವೆಚ್ಚಕ್ಕಾಗಿ ಹಸ್ತಾಂತರಿಸುವ ಕಾರ್ಯಕ್ರಮವನ್ನು ರವಿವಾರ ಮಲ್ಪೆ ಶ್ರೀಸರ್ವೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು.
ಗುಜ್ಜರ್ಬೆಟ್ಟು ನಿವಾಸಿ ಭಾರತಿ ಮತ್ತು ಮಂಜುನಾಥ್ ದಂಪತಿಯ 1 ವರ್ಷದ ಮಗಳು ಆಧ್ಯಾಳ ಹೃದಯ ಚಿಕಿತ್ಸೆಗಾಗಿ 1ಲಕ್ಷ ರೂ. ಹಾಗೂ ಸಾಬ್ರರಕಟ್ಟೆ ನಿವಾಸಿ ಶಂಭು ಅವರ ಮಗಳು ಸಿಂಚನಾಳ ಕಿಡ್ನಿ ವೈಲ್ಯದ ಚಿಕಿತ್ಸೆಗಾಗಿ 55 ಸಾವಿರ ರೂ.ವನ್ನು ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿ, ಯುವ ಸಮುದಾಯ ಮಾನವೀಯತೆಗೆ ಮಿಡಿ ಯುವ ಮನಸ್ಸು ಮಾಡಿದಲ್ಲಿ ಸಮಾಜದಲ್ಲಿ ಬಹಳಷ್ಟು ಸಮೃದ್ಧಿ ಸಾಧಿಸಲು ಸಾಧ್ಯ. ಸಮಾಜದಲ್ಲಿರುವ ಅಶಕ್ತರ ನೋವಿಗೆ ಸ್ಪಂದಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶ್ರೀಸರ್ವೇಶ್ವರ ದೇವಸ್ಥಾನದ ಕ್ಷೇತ್ರಾಡಳಿತ ಅಧ್ಯಕ್ಷ ಗಣೇಶ್ ಅಮೀನ್ ಬಾಪುತೋಟ, ಮಲ್ಪೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಮೈಂದನ್, ಸುಮನಸಾ ಸಂಸ್ಥೆಯ ಪ್ರವೀಣ್ ಜಿ. ಕೊಡವೂರು, ಟಿವಿ ನಿರೂಪಕ ತೇಜೆಶ್ ಜೆ.ಬಂಗೇರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಮಹೇಶ್ ಪೂಜಾರಿ ಹೂಡೆ ಅವರನ್ನು ಸನ್ಮಾನಿಸಲಾಯಿತು. ಶ್ರೀಸರ್ವೇಶ್ವರ ಫ್ರೆಂಡ್ಸ್ ನ ಚೇತನ ಬಾಪುತೋಟ ಸ್ವಾಗತಿಸಿ, ವಂದಿಸಿದರು. ರಂಗನಟ, ನಿರ್ದೇಶಕ ದಿವಕರ್ ಕಟೀಲ್ ಕಾರ್ಯಕ್ರಮ ನಿರೂಪಿಸಿದರು.