ಸೆ.17:ಖಾಸಿಂ ಉಸ್ತಾದ್ ಅನುಸ್ಮರಣೆ
ಮಂಗಳೂರು, ಸೆ.16: ಸಮಸ್ತದ ನಾಯಕ, ಮೂಡಿಗೆರೆ ಸಂಯುಕ್ತ ಜಮಾಅತ್ ಖಾಝಿ ಉಸ್ತಾದುಲ್ ಅಸಾತೀದ್ ಶೈಖುನಾ ಖಾಸಿಂ ಉಸ್ತಾದ್ರ ಜಿಲ್ಲಾಮಟ್ಟದ ಅನುಸ್ಮರಣೆ ಹಾಗೂ ವಾಗ್ಮಿ ಅಬ್ದುಸ್ಸಮದ್ ಪೂಕೋಟೂರು ಅವರ ‘ಶರೀಅತ್ ವಿವಾದ ಹೊಸ ಬೆಳವಣಿಗೆ’ ಎಂಬ ವಿಷಯದ ಬಗ್ಗೆ ಪ್ರಭಾಷಣವು ರೌಳತುಲ್ ಉಲೂಂ ಕರ್ನಾಟಕ ಇದರ ಆಶ್ರಯದಲ್ಲಿ ಸೆ.17ರಂದು ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಎಸ್ಬಿ ದಾರಿಮಿ ಮತ್ತು ಕಾರ್ಯದರ್ಶಿ ಕೆಎಲ್ ಉಮರ್ ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story