ಉಡುಪಿ: ಮಕ್ಕಳ ಕುರಿತು ಪೊಲೀಸ್ ಸಿಬ್ಬಂದಿಗೆ ತರಬೇತಿ ಕಾರ್ಯಗಾರ
ಉಡುಪಿ, ಸೆ.17: ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ಮಣಿಪಾಲ ಮಾಹೆ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ದೊಡ್ಡಣಗುಡ್ಡೆ ಎ.ವಿ.ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಸಹಭಾಗಿತ್ವ ದಲ್ಲಿ ಉಡುಪಿ ತಾಲೂಕು ಪೊಲೀಸ್ ಸಿಬ್ಬಂದಿಗೆ ಚೈಲ್ಡ್ ಮ್ಯಾನೇಜ್ಮೆಂಟ್ ತರಬೇತಿ ಕಾರ್ಯಗಾರವನ್ನು ಇತ್ತೀಚೆಗೆ ಮಣಿಪಾಲ ಮಾಹೆಯ ಹೆಲ್ತ್ ಸೈನ್ಸ್ ಲೈಬ್ರೆರಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಯುರೊಪಿಯನ್ ಸ್ಟಡೀಸ್ ವಿಭಾಗದ ಮುಖ್ಯಸ್ಥೆ ಹಾಗೂ ಪ್ರೊಫೆಸರ್ ಡಾ.ನೀತಾ ಇನಾಮ್ದಾರ್ ಮಾತನಾಡಿ, ಮಕ್ಕಳ ಮ್ಯಾನೇಜ್ಮೆಂಟ್ ಮಾಡುದಕ್ಕಿಂತ ಮಕ್ಕಳ ಜೊತೆ ಹೆಚ್ಚು ಎಂಗೇಜ್ ಆಗಿರ ಬೇಕು. ಮಕ್ಕಳಿರುವಾಗಲೇ ಅವರಿಗೆ ನೈತಿಕ ಪಾಠವನ್ನು ಹೇಳಿಕೊಡಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಗ್ರೇಸಿ ಗೊನ್ಸಾಲ್ವಿಸ್ ಮಾತನಾಡಿ, ಮಕ್ಕಳ ಪಲಾನೆ ಹೇಗೆ ಮಾಡುತ್ತಿದ್ದೇವೆ ಮತ್ತು ಮಕ್ಕಳಿಗೆ ನಾವು ಎಷ್ಟು ಸಮಯ ಮೀಸಲಿಟ್ಟಿದ್ದೇವೆ ಎಂಬುದರ ಬಗ್ಗೆ ಚಿಂತಿಸ ಬೇಕಾಗುತ್ತೆ. ಮಕ್ಕಳ ಬಳಿ ಸ್ವಲ್ಪಸಮಯ ಹಾಗೂ ಪ್ರೀತಿಯಿಂದ ಮಾತನಾಡ ಬೇಕು ಎಂದು ತಿಳಿಸಿದರು.
ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ ಮಾತನಾಡಿ, ಮಕ್ಕಳ ಶಿಕ್ಷಣ ಬಗ್ಗೆ ಕೇವಲ ಟೀಚರ್ ಮಾತನಾಡಿದರೆ ಸಾಕಾಗುದಿಲ್ಲ. ಎಲ್ಲಾರು ಒಟ್ಟಾಗಿ ಮಾತ ನಾಡಬೇಕು. ಹೀಗೆ ಇದ್ದರೆ ಮಾತ್ರ ಪೊಲೀಸರ ಸಮಸ್ಯೆ ಏನು ಎಂಬುದು ಅರ್ಥಮಾಡಿಕೊಳ್ಳಲು ಸಾಧ್ಯ. ಉಡುಪಿ ಜಿಲ್ಲೆಯಲ್ಲಿ ಮಗು ಸ್ನೇಹಿ ಪೊಲೀಸ್ ಸ್ಟೇಶನ್ ಆಗಬೇಕು ಎಂದು ಹೇಳಿದರು.
ಮನೋತಜ್ಞ ಡಾ.ಪಿ.ವಿ.ಭಂಡಾರಿ, ಮಣಿಪಾಲ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್, ಪ್ರಸನ್ನ ಸ್ಕೂಲ್ನ ಸಹಾಯಕ ಪ್ರೊಫೆಸರ್ ಐಡಾ ಡಿಸೋಜ, ಸಂಯೋಜಕಿ ಲೆನಾ ಅಶೋಕ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ದಿವಾಕರ್ ಕುಮಾರ್ ಮಾತನಾಡಿ ದರು. ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಎಸ್.ವಿ.ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಸನ್ನ ಸ್ಕೂಲ್ನ ಸಹಾಯಕ ಪ್ರೊಫೆಸರ್ ಅರ್ಲಿಕ್ ಡಿಸೋಜ, ಉಡುಪಿ ಚೈಲ್ಡ್ ಲೈನ್ ಟೀಮ್ ಸದಸ್ಯರಾದ ಮೋಹನ್ ಮತ್ತು ಪ್ರಮೋದ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಕೋಶಾಧಿಕಾರಿ ಸೀಮಾ ಮೊದಲಾದವರು ಉಪಸ್ಥಿತರಿ ದ್ದರು. ಎಂಎಸ್ಡಬ್ಲ್ಯೂ ಪ್ರೊ.ಹೀರಾ ಸ್ವಾಗತಿಸಿದರು. ಪ್ರಭಾಕರ್ ಆಚಾರ್ಯ ವಂದಿಸಿದರು. ರಾಜ್ಯ ಸಂಪನ್ಮೂಲ ವ್ಯಕ್ತಿ ಜಯವಂತ ರಾವ್ ಕಾರ್ಯಕ್ರಮ ನಿರೂಪಿಸಿದರು.