ಮಸೀದಿಯಲ್ಲಿ ‘ಜಂತುಹುಳ ಕಾರ್ಯಕ್ರಮ’ ಮಾಹಿತಿ ನೀಡಲು ಕರೆ
ಮಂಗಳೂರು, ಸೆ.19: ರಾಷ್ಟ್ರೀಯ ಜಂತುಹುಳ ಕಾರ್ಯಕ್ರಮದ ಮಹತ್ವವನ್ನು ಶುಕ್ರವಾರದ ಜುಮ್ಮಾ ನಮಾಝ್ ಬಳಿಕ ದ.ಕ. ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಮಾಹಿತಿ ನೀಡಬೇಕು ಎಂದು ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೆ.25ರಂದು 19 ವರ್ಷದೊಳಗಿನ ಮಕ್ಕಳಿಗೆ ‘ಅಲ್ಬೆಂಡರೆಲ್’ ಹೆಸರಿನ ಜಂತುಹುಳ ನಿವಾರಣಾ ಮಾತ್ರೆ ನೀಡಲಿದ್ದಾರೆ. ಸಮೀಪದ ಅಂಗನವಾಡಿ ಕೇಂದ್ರ, ಸರಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ಈ ಮಾತ್ರೆಗಳನ್ನು ವಿತರಿಸಲಾಗುತ್ತದೆ. ಇದರಿಂದ ಮಕ್ಕಳಿಗೆ ಪೌಷ್ಟಿಕಾಂಶ ಕೊರತೆ ಹಾಗೂ ರಕ್ತಹೀನತೆ ನಿವಾರಣೆಯಾಗುತ್ತದೆ. ಈ ಮಾಹಿತಿಯನ್ನು ಮಸೀದಿಯಲ್ಲಿ ವಿವರಿಸಬೇಕು ಎಂದು ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story