ಡಿವೈಎಫ್ಐ ಕೊಲ್ಲರಕೋಡಿ ಘಟಕ ಸಮ್ಮೇಳನ; ಪದಾಧಿಕಾರಿಗಳ ಆಯ್ಕೆ
ನರಿಂಗಾನ, ಸೆ.30: ಡಿವೈಎಫ್ಐ ಕೊಲ್ಲರಕೋಡಿ ಘಟಕದ ಯುವಜನ ಸಮ್ಮೇಳನ ಹಾಗು ಪದಾಧಿಕಾರಿಗಳ ಆಯ್ಕೆ ರವಿವಾರ ಸಂಜೆ ಕೊಲ್ಲರಕೋಡಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಉದ್ಘಾಟಿಸಿದರು. ಡಿವೈಎಫ್ಐ ಕೊಲ್ಲರಕೋಡಿ ಘಟಕದ ಅಧ್ಯಕ್ಷ ಶರೀಫ್ ಅಧ್ಯಕ್ಷತೆವಹಿಸಿದರು.
ನೂತನ ಅಧ್ಯಕ್ಷರಾಗಿ ಆಸಿಫ್ ಕೆ.ಎಚ್, ಕಾರ್ಯದರ್ಶಿ ನೌಶೀಫ್, ಉಪಾಧ್ಯಕ್ಷರಾಗಿ ಶರೀಫ್, ಸಹೀರ್, ಜೊತೆಕಾರ್ಯದರ್ಶಿಯಾಗಿ ಅಮೀರ್, ನಿಝಾಮ್, ಕೋಶಾಧಿಕಾರಿಯಾಗಿ ರೌಫ್ ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಡಿವೈಎಫ್ಐ ಮುಖಂಡರಾದ ರಝಾಕ್ ಮೊಂಟೆಪದವು, ಅಶ್ರಫ್ ಕೆ.ಸಿ. ರೋಡ್, ರಫೀಕ್ ಹರೇಕಳ, ಅಶ್ರಫ್ ಹರೇಕಳ ಉಪಸ್ಥಿತರಿದ್ದರು.