ಎಸ್.ವೈ.ಎಸ್ ಅಳಕೆಮಜಲು ಬ್ರಾಂಚ್ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ವಿಟ್ಲ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಅಳಕೆಮಜಲು ಬ್ರಾಂಚ್ ಇದರ ವಾರ್ಷಿಕ ಮಹಾ ಸಭೆಯು ಮುಹಮ್ಮದ್ ಅಲ್ ಖಾಸಿಮಿ ಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಹಿದಾಯತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಸ್ಥಳೀಯ ಖತೀಬ್ ಮುಹಮ್ಮದ್ ಶರೀಫ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಸಂಘಟನಾ ತರಬೇತುದಾರರಾಗಿ ಆಗಮಿಸಿದ್ದ ಎಸ್.ವೈ.ಎಸ್ ರಾಜ್ಯಧ್ಯಕ್ಷ ಜಿ.ಎಂ ಕಾಮಿಲ್ ಸಖಾಫಿಯವರು ಸಂಘಟನೆಯ ಅನಿವಾರ್ಯತೆ, ಕಾರ್ಯಚಟುವಟಿಕೆ ಮುಂತಾದ ವಿಷಯಗಳ ಬಗ್ಗೆ ವಿಷಯ ಮಂಡಿಸಿದರು. ವೀಕ್ಷಕರಾಗಿ ಆಗಮಿಸಿದ್ದ ಎಸ್.ವೈ.ಎಸ್ ವಿಟ್ಟ ಸೆಂಟರ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ಚುನಾವಣೆಗೆ ನೇತೃತ್ವ ನೀಡಿದರು.ಬಳಿಕ ಹಳೆ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಅಲ್ ಖಾಸಿಮಿ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಖಾದರ್ ಮುಸ್ಲಿಯಾರ್, ಮಹಮ್ಮದ್ ಕುಂಞ ಹಾಜಿ, ಪ್ರ.ಕಾರ್ಯದರ್ಶಿಯಾಗಿ ಕಾಸಿಂ ಸಖಾಫಿ ಟೀಂ ಇಸಾಬ ಕಾರ್ಯದರ್ಶಿಯಾಗಿ ಆದಂ ನಿನ್ನಿಕಲ್ಲು, ಕಾರ್ಯದರ್ಶಿಯಾಗಿ ಹಂಝ ಪಿ.ಎ, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಕೋನಿಮಾರ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ರಹಿಮಾನ್ ಹಾಜಿ (ಬೀಡಿ), ಅಬ್ದುಲ್ ರಹಿಮಾನ್ ಹಾಜಿ (ಮಸ್ಕತ್), ಬದ್ರುದ್ದೀನ್ ಹಾಜಿ, ಅಬೂಬಕ್ಕರ್ ಕಟ್ಟ, ಹನೀಫ್ ಬಗ್ಗುಮೂಲೆ, ಅಶ್ರಫ್ ಕೆ.ಜಿ.ಎನ್, ರಫೀಕ್ ಸಿಯಾನ, ಅಬೂಬಕ್ಕರ್ ನಡುಮಜಲು, ಹಂಝ ಅಳಕೆಮಜಲು, ಉಸ್ಮಾನ್, ಮೊಯಿದೀನ್ ಅಂತರಗುತ್ತು, ಇಬ್ರಾಹಿಂ ಟೈಲರ್, ಉಮರ್ ಕುಂಞ ಡ್ರೈವರ್, ಶರೀಫ್ ಮೇಸ್ತ್ರೀ, ಖಾದರ್ ಕರೆಕೊಡಿ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಮುಸ್ಲಿಯಾರ್, ಮುಹ್ಯುದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಮಸ್ಕತ್, ಉಪಾಧ್ಯಕ್ಷರಾದ ರಝಾಕ್ ಹಾಜಿ, ಕೋಶಾಧಿಕಾರಿ ಕುಂಞ ಹಾಜಿ, ಪ್ರ.ಕಾರ್ಯದರ್ಶಿ ಅಶ್ರಫ್ ಕೆ.ಜಿ.ಎನ್, ಪ್ರಮುಖರಾದ ಅಬ್ದುಲ್ ರಹಿಮಾನ್ ಹಾಜಿ, ಮುಹಮ್ಮದ್ ಕುಂಞ ಹಾಜಿ, ಮದ್ರಸ ಮಖ್ಯೋಪಾಧ್ಯಾಯರಾದ ದಾವೂದ್ ಅಶ್ರಫಿ, ಅಧ್ಯಾಪಕರಾದ ಹನೀಫ್ ಸಅದಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಕಾಸಿಂ ಸಖಾಫಿ ಸ್ವಾಗತಿಸಿ, ವಂದಿಸಿದರು.