ಬಜ್ಪೆ: ನದಿಯಲ್ಲಿ ಮುಳುಗಿ ಬಾಲಕ ಮೃತ್ಯು
ಬಜ್ಪೆ : ನದಿಯಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ಕಟೀಲು ಸಮೀಪದ ಮಿತ್ತಬೈಲ್ ಎಂಬಲ್ಲಿ ಶುಕ್ರವಾರ ನಡೆದಿದೆ.
ನೀರು ಪಾಲಾದ ಬಾಲಕನನ್ನು ಶಿಬರೂರು ದೇಲಂತಬೆಟ್ಟುವಿನ ಕೈಯೂರು ನಿವಾಸಿ ಕೃಷ್ಣ ಆಚಾರ್ಯ ಎಂಬವರ ಏಕೈಕ ಪುತ್ರ ಉದಯ ಆಚಾರ್ಯ ಎಂದು ಗುರುತಿಸಲಾಗಿದೆ.
ಆತ ತನ್ನ ಗೆಳೆಯರೊಂದಿಗೆ ನಂದಿನಿ ನದಿಯಲ್ಲಿ ಈಜಲು ಹೋಗಿದ್ದು, ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಉದಯ ಆಚಾರ್ಯ ಮಂಗಳೂರಿನ ಕೆಪಿಟಿ ಯಲ್ಲಿ ಪ್ರಥಮ ವರ್ಷದ ಐಟಿಐ ವಿದ್ಯಾರ್ಥಿಯಾಗಿದ್ದ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
Next Story