ಅಂದರ್ಬಾಹರ್: 13 ಮಂದಿ ಬಂಧನ
ಕಾರ್ಕಳ, ಅ.6: ಕಾಬೆಟ್ಟು ಕಟ್ಟೆಮಾರ್ ಎಂಬಲ್ಲಿ ಅ.5ರಂದು ರಾತ್ರಿ ಅಂದರ್ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ 10 ಮಂದಿಯನ್ನು ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್ ಪಿ. ನೇತೃತ್ವದ ತಂಡ ಬಂಧಿಸಿದೆ.
ಕಾಬೆಟ್ಟುವಿನ ಕೆ.ಮಹಮ್ಮದ್(61), ಹಿರಿಯಂಗಡಿಯ ಸುಕೇಶ(33), ಕುಕ್ಕುಂದೂರಿನ ಸುಜೀತ್ ಕುಮಾರ್(38), ನಟರಾಜ(42), ತೆಳ್ಳಾರಿನ ಗಣೇಶ(35), ರಾಜೇಂದ್ರ ಕುಮಾರ(69), ಜೋಡುರಸ್ತೆಯ ಪೈಯಾಜ್ (26), ಜಾರ್ಕಳದ ಸುರೇಶ ಪೂಜಾರಿ(46), ಗುಂಡ್ಯಡ್ಕದ ಮಂಜೇಶ(40), ಅತ್ತೂರಿನ ಶಿವಾನಂದ ಶೆಟ್ಟಿ(47) ಬಂಧಿತ ಆರೋಪಿಗಳು.
ಅದೇ ರೀತಿ ಆರೋಪಿಗಳಿಗೆ ಮುನ್ಸೂಚನೆ ನೀಡುತ್ತಿದ್ದ ಕಾಂತಾವರದ ಕುಟ್ಟಿ ಶೆಟ್ಟಿ(60), ಕಾರ್ಕಳದ ಪ್ರಸಾದ ಕೆ.(40), ಮುದರಂಗಡಿಯ ಶರತ್ ಕುಮಾರ(35) ಎಂಬವರನ್ನು ಕೂಡ ಬಂಧಿಸಲಾಗಿದೆ. ದಾಳಿ ವೇಳೆ 10 ಮಂದಿ ಆರೋಪಿಗಳು ಪರಾರಿಯಾಗಿದ್ದಾರೆ.
ಬಂಧಿತರಿಂದ 16 ಮೊಬೈಲ್ ಪೋನ್ಗಳನ್ನು, 5 ವಾಹನಗಳನ್ನು ಹಾಗೂ 15,730ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story