ಕಾಸರಗೋಡು : ರೈಲ್ವೆ ಹಳಿ ಸೇತುವೆಯಿಂದ ನದಿಗೆ ಬಿದ್ದ ವ್ಯಕ್ತಿ ಮೃತ್ಯು
ಕಾಸರಗೋಡು : ರೈಲ್ವೆ ಹಳಿ ಸೇತುವೆಯಿಂದ ನದಿಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕುಂಬಳೆ ಶಿರಿಯದಲ್ಲಿ ನಡೆದಿದೆ.
ಬೇಡಡ್ಕದ ಅನಂತ (40) ಮೃತಪಟ್ಟವರು. ಸಂಬಂಧಿಕರ ಜೊತೆ ಶಿರಿಯ ಸೇತುವೆ ಮೇಲೆ ಕುಳಿತ್ತಿದ್ದಾಗ ಸಂದರ್ಭ ಆಕಸ್ಮಿಕವಾಗಿ ನದಿಗೆ ಬಿದ್ದು ಈ ಅವಘಡ ನಡೆದಿದೆ.
ಬಳಿಕ ಅಗ್ನಿಶಾಮಕ ದಳ , ಪೊಲೀಸರು ನಡೆಸಿದ ಶೋಧದಿಂದ ಮೃತದೇಹವನ್ನು ಮೇಲಕ್ಕೆತ್ತಲಾಯಿತು. ಜೊತೆಗಿದ್ದವರಿಂದ ಕುಂಬಳೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ .
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ.
Next Story