ಗಂಗೊಳ್ಳಿ: ಬೆಂಕಿ ಅಕಸ್ಮಿಕ, ಮೀನುಗಾರ ಮೃತ್ಯು
ಗಂಗೊಳ್ಳಿ, ಅ.9: ಗಂಗೊಳ್ಳಿ ಬಂದರಿನಲ್ಲಿ ನಿಲ್ಲಿಸಿದ್ದ ಬೋಟ್ನಲ್ಲಿ ಸ್ಟೌವ್ ಹೊತ್ತಿಸಿ ಟೀ ಮಾಡುತಿದ್ದ ವೇಳೆ ಸ್ಟೌವ್ಮೇಲೆ ಬಿದ್ದು ಸುಟ್ಟುಗಾಯಕ್ಕೊಳಗಾಗಿ ಚಿಕಿತ್ಸೆ ಪಡೆಯುತಿದ್ದ ನಾವುಂದ ಗ್ರಾಮದ ಮಸ್ಕಿ ಶೆಟ್ರಹಿತ್ಲುವಿನ ಬಾಬು ಪೂಜಾರಿ (56) ಎಂಬವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ಬಾಬು ಪೂಜಾರಿ ಅವರು ಕಳೆದ ಮೂರು ತಿಂಗಳಿನಿಂದ ಗಂಗೊಳ್ಳಿಯ ರಾಘವೇಂದ್ರ ದೇವಾಡಿಗ ಎಂಬವರ ಬೋಟಿನಲ್ಲಿ ಮೀನುಗಾರಿಕೆ ವೃತ್ತಿ ಮಾಡುತಿದ್ದರು. ಅ.6ರಂದು ಗಂಗೊಳ್ಳಿ ಬಂದರಿನಲ್ಲಿ ನಿಲ್ಲಿಸಿದ್ದ ಬೋಟ್ನಲ್ಲಿ ಬೆಳಗಿನ ಜಾವ 5 ಗಂಟೆಗೆ ಸ್ಟೌವ್ ಹೊತ್ತಿಸಿ ಟೀ ಮಾಡುತಿರುವಾಗ ಅಕಸ್ಮಿಕ ನಡೆದಿತ್ತು. ಚಿಕಿತ್ಸೆಗಾಗಿ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿನ್ನೆ ರಾತ್ರಿ ಮೃತಪಟ್ಟಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story