ಮಂಜೇಶ್ವರ : ಮುಸುಕುಧಾರಿ ತಂಡದಿಂದ ಇರಿತ ; ಯುವಕನಿಗೆ ಗಂಭೀರ ಗಾಯ
ಮಂಜೇಶ್ವರ : ಬೈಕ್ ನಲ್ಲಿ ಬಂದ ಮೂವರು ಮುಸುಕುಧಾರಿ ತಂಡವೊಂದು ಯುವಕನೋರ್ವನನ್ನು ತಲವಾರಿನಿಂದ ಇರಿದ ಘಟನೆ ಮೀಯಪದವಿನಲ್ಲಿ ನಡೆದಿದೆ.
ಮೀಯಪದವು ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಫೈಝಲ್ ಇರಿತಕ್ಕೊಳಗಾದ ಯುವಕ. ಬುಧವಾರ ರಾತ್ರಿ 10.30 ಸುಮಾರಿಗೆ ಫೈಝಲ್ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಬೈಕೊಂದರಲ್ಲಿ ಬಂದ ಮುಸುಕುದಾರಿ ತಂಡ ತಲವಾರಿನಿಂದ ಇರಿದು ಪರಾರಿಯಾಗಿದೆ.
ಇರಿತದಿಂದ ಗಂಭೀರ ಗಾಯಗೊಂಡ ಫೈಝಲ್ ರನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story