ವಿಷ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆ
ಕಾರ್ಕಳ, ಅ.12: ವಿದ್ಯಾರ್ಥಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.11ರಂದು ಬೆಳಗ್ಗೆ ನಿಟ್ಟೆ ಗ್ರಾಮದ ಅತ್ತೂರು ಚಚರ್ ಬಳಿ ನಡೆದಿದೆ.
ಮೃತರನ್ನು ನಲ್ಲೂರು ಗ್ರಾಮದ ಬೀರಾಲ್ ಪೇಟೆಯ ಜಗನ್ನಾಥ ನಲ್ಕೆ ಎಂಬವರ ಮಗ ಶರಣ್(19) ಎಂದು ಗುರುತಿಸಲಾಗಿದೆ. ಕಾರ್ಕಳ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಶರಣ್, ತನ್ನ ಸ್ನೇಹಿತ ಸುಖೇಶ್ ಆಚಾರಿ ಎಂಬವರೊಂದಿಗೆ ಬೈಕಿನಲ್ಲಿ ಅತ್ತೂರು ಚರ್ಚ್ ಬಳಿ ಬಂದಿದ್ದು, ಅಲ್ಲಿ ಬೈಕಿನಿಂದ ಇಳಿದ ಶರಣ್ ತನ್ನಲ್ಲಿದ್ದ ವಿಷವನ್ನು ಸೇವಿಸಿದ ಎನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಶರಣ್ ಮುಲ್ಕಿ ಸರಕಾರಿ ಆಸ್ಫತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಜಗನ್ನಾಥ್ ನಲ್ಕೆಯ ಮೂವರು ಪುತ್ರರಲ್ಲಿ ಶರಣ್ ಕೊನೆಯ ಮಗನಾಗಿದ್ದನು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story