ವಾಲ್ಮೀಕಿಯಂತೆ ಪರಿವರ್ತನೆಯ ಮೂಲಕ ಸಾಧನೆ ಸಾಧ್ಯ: ದಿನಕರ ಬಾಬು
ಉಡುಪಿ ಅ.13: ಕ್ರೌಂಚ ಪಕ್ಷಿಗಳ ಸಾವಿನ ಘಟನೆ ಕಂಡು ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯ ರಚಿಸಿದರು. ಅದರಂತೆ ಸುತ್ತ ಮುತ್ತ ನಡೆಯುವ ಘಟನೆಗಳನ್ನು ಅರಿಯುವ ಮೂಲಕ ಜೀವನದಲ್ಲಿ ಪರಿವರ್ತನೆ ಹೊಂದಿ ಮಹತ್ತರ ಸಾಧನೆಗಳನ್ನು ಮಾಡಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಠ ವರ್ಗಗಳ ಸಂಘಟನೆಗಳ ಸಹಯೋಗದಲ್ಲಿ ರವಿವಾರ ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೆಳವರ್ಗದ ಬೇಡನಾದ ರತ್ನಾಕರ ಅವರು ಪರಿವರ್ತನೆ ಹೊಂದಿ ಮಹರ್ಷಿ ವಾಲ್ಮೀಕಿ ಆಗಿ ಬದಲಾಗಿ ರಾಮಾಯಣ ಮಹಾಗ್ರಂಥ ರಚಿಸಿದರು. ಅದೇ ರೀತಿ ಪ್ರಸ್ತುತ ಸಮಾಜದಲ್ಲಿನ ಹಿಂದುಳಿದ ವರ್ಗಗಳ ಜನತೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿ ಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಮಹರ್ಷಿ ವಾಲ್ಮೀಕಿ ಅವರ ವ್ಯಕ್ತಿತ್ವ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೊವಾಡಿ, ಮಹರ್ಷಿ ವಾಲ್ಮೀಕಿ ಆದಿಕವಿ ಮಾತ್ರ ವಲ್ಲದೇ, ಮಹಾನ್ ದಾರ್ಶನಿಕ, ಚಿಂತಕ, ಶಿಕ್ಷಣ ತಜ್ಞ, ರಾಜನೀತಿ ತಜ್ಞ ಹಾಗೂ ವಿಶ್ವ ಮಾನವರಾಗಿದ್ದರು. ಸುಮಾರು 2000 ವರ್ಷಗಳ ಹಿಂದೆ ರಚಿತ ವಾದ ರಾಮಾಯಣದಲ್ಲಿ, ಪ್ರಾಣಿ, ಪಕ್ಷಿ, ಸಸ್ಯ ಸಂಕುಲ, ನದಿಗಳು ಅನಾವರಣ ಗೊಂಡಿವೆ ಎಂದು ಅವರು ತಿಳಿಸಿದರು.
ರಾಜಧರ್ಮ, ಕುಲಧರ್ಮ, ಯುದ್ದ ಧರ್ಮಗಳಿಗೆ ಹೊಸ ಆಯಾಮ ರಾಮಾಯಣದಲ್ಲಿದೆ. ತಮ್ಮ ಕಾಲದ ವೌಲ್ಯಗಳ ಜೊತೆಗೆ ಭವಿಷ್ಯದ ವೌಲ್ಯಗಳನ್ನು ಸಾರುವ ಮೂಲಕ ರಾಮಾಯಣ ಇಂದಿಗೂ ಪ್ರಸ್ತುತವಾಗಿದ್ತೆ ರಾಮಾಯಣದಲ್ಲಿ ಪ್ರಕೃತಿ ವರ್ಣನೆ, ಪ್ರಜಾಪ್ರಭುತ್ವದ ಅಂಶಗಳು, ವಿಶ್ವ ಭ್ರಾತೃತ್ವದ ಸಂದೇಶಗಳಿದ್ದು ನಿರಂತರ ಅಧ್ಯಯನಶೀಲ ಗ್ರಂಥವಾಗಿದೆ. ಸಾಮಾಜಿಕ ನ್ಯಾಯ ಮತ್ತು ಮಾನವೀಯತೆ ರಾಮಾಯಣದ ಸಂದೇಶ ವಾಗಿದ್ದು, ಆ ಮೂಲಕ ವೌಲ್ಯಯುತ ಸಮಾಜ ನಿರ್ಮಾಣವಾಗಬೇಕು ಎಂದರು.
ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪರಿಶಿಷ್ಟ ವರ್ಗದ ಸಮುದಾಯದಲ್ಲಿ ವಿಶೇಷ ಸಾಧನೆ ಮಾಡಿದ ಬೊಗ್ರ ಕೊರಗ, ಅಶೋಕ್ ಶೆಟ್ಟಿ, ಶ್ರೀಧರ ಗೌಡ, ಮೀರಾ ನಾಯಕ್ ಹಾಗೂ ಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಡೋಲು ವಾದಕ ಶತಾಯುಷಿ ಗುರವ ಕೊರಗ ಅವರನ್ನು ಅಭಿನಂದಿಸ ಲಾಯಿತು. ಈ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಿವಿ ಸೌಲಭ್ಯಗಳನ್ನು ವಿತರಿಸಲಾಯಿತು.
ಉಡುಪಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಉಪಸ್ಥಿತರಿದ್ದರು. ಯೋಜನಾ ಸಮನ್ವಯಾಧಿಕಾರಿ ಹಾಕಪ್ಪ ಲಮಾಣಿ ಸ್ವಾಗತಿಸಿ ದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪರಿಶಿಷ್ಠ ವರ್ಗದ ಕಲಾತಂಡಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು.