ಮಂಗಳೂರು: ಕಾರಂತ ಪಾರ್ಕ್ಗೆ ಯುದ್ಧ ವಿಮಾನ ನೀಡಲು ರಕ್ಷಣಾ ಸಚಿವರಿಗೆ ಮನವಿ
ಮಂಗಳೂರು, ಅ.15: ಬಂದರು, ಒಳನಾಡು ಸಾರಿಗೆ ಮತ್ತು ಮುಜರಾಯಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಉಡುಪಿ ಜಿಲ್ಲೆಯ ಕೋಟ ಶಿವರಾಮ ಕಾರಂತ ಪಾರ್ಕ್ಗೆ ಮಕ್ಕಳ ಮನರಂಜನೆಗಾಗಿ ರಕ್ಷಣಾ ಇಲಾಖೆಯ ನಿಷ್ಕ್ರಿಯ ಯುದ್ಧ ವಿಮಾನ ನೀಡಲು ಮನವಿ ಸಲ್ಲಿಸಿದರು.
ಕೋಟ ಶಿವರಾಮ ಕಾರಂತ ಪಾರ್ಕ್ನಲ್ಲಿ ಪ್ರತಿವರ್ಷ 10 ದಿನಗಳವರೆಗೆ ‘ಕಾರಂತ ಉತ್ಸವ’ ನಡೆಸಲಾಗುತ್ತಿದೆ. ಉತ್ಸವದಲ್ಲಿ ಸಾಂಸ್ಕೃತಿಕ, ಕಲೆ ಮತ್ತು ವೈಜ್ಞಾನಿಕ ಚಟುವಟಿಕೆಗಳು ನಡೆಯಲಿವೆ. ಉತ್ಸವದಲ್ಲಿ ದೇಶದ ವಿವಿಧೆಡೆಯ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಭಾಗವಹಿಸುತ್ತಾರೆ. ಪ್ರವಾಸ ಅಧ್ಯಯನಕ್ಕಾಗಿ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಪಾರ್ಕ್ಗೆ ಭೇಟಿ ನೀಡುತ್ತಿದ್ದಾರೆ. ಕರಾವಳಿಯಲ್ಲಿ ಯುದ್ಧ ವಿಮಾನ ಪ್ರದರ್ಶನಕ್ಕೆ ಎಲ್ಲೂ ಅವಕಾಶ ಇಲ್ಲದಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Next Story